Quantcast
Channel: Kannada Dunia | Kannada News | Karnataka News | India News
Viewing all 122063 articles
Browse latest View live

ಟಿವಿ ನೋಡುವ ನೆಪದಲ್ಲಿ ಮನೆಗೆ ಬಂದ ಅಪ್ರಾಪ್ತ ಮಾಡಿದ ಇಂಥ ಕೆಲಸ

$
0
0

ಮಧ್ಯಪ್ರದೇಶದ ಉಜ್ಜಯನಿಯಲ್ಲಿ ನಾಲ್ಕು ವರ್ಷದ ಬಾಲಕಿ ಮೇಲೆ ಅಪ್ರಾಪ್ತ ಅತ್ಯಾಚಾರವೆಸಗಿದ ಘಟನೆ ಬೆಳಕಿಗೆ ಬಂದಿದೆ. 14 ವರ್ಷದ ಹುಡುಗ ನಾಲ್ಕು ವರ್ಷದ ಬಾಲಕಿ ಅತ್ಯಾಚಾರವೆಸಗಿದ್ದಾನೆ. ಹುಡುಗ ನಾಪತ್ತೆಯಾಗಿದ್ದು, ಆತನ ಪತ್ತೆ ಕಾರ್ಯ ನಡೆಯುತ್ತಿದೆ.

ಆರೋಪಿ, ಪೀಡಿತೆ ಮನೆಗೆ ಟಿವಿ ನೋಡಲು ಬರ್ತಿದ್ದ ಎನ್ನಲಾಗಿದೆ. ಘಟನೆ ನಡೆದ ದಿನ ಪೀಡಿತೆ ಮಾತ್ರ ಮನೆಯಲ್ಲಿದ್ದಳಂತೆ. ಅವಕಾಶ ಬಳಸಿಕೊಂಡ ಹುಡುಗ ಅತ್ಯಾಚಾರವೆಸಗಿದ್ದಾನೆ. ಘಟನೆ ನಂತ್ರ ಹುಡುಗ ನಾಪತ್ತೆಯಾಗಿದ್ದಾನೆ. ಮನೆಗೆ ಬಂದ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಧ್ಯಪ್ರದೇಶದಲ್ಲಿ ಅಪ್ರಾಪ್ತೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣ ಹೆಚ್ಚಾಗ್ತಿದೆ. ಅಪ್ರಾಪ್ತೆಯರ ಮೇಲೆ ಅತ್ಯಾಚಾರವೆಸಗಿದ ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸುವ ಕಾಯ್ದೆಗೆ ಕೆಲ ದಿನಗಳ ಹಿಂದಷ್ಟೇ ಮಂಜೂರಿ ಸಿಕ್ಕಿದೆ. ಕಳೆದ ವರ್ಷ ಮೇ ತಿಂಗಳಿನಲ್ಲಿ 23 ವರ್ಷದ ವ್ಯಕ್ತಿ 4 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ. ವಿಚಾರಣೆ ನಡೆಸಿದ ಕೋರ್ಟ್ ಫೆಬ್ರವರಿಯಲ್ಲಿ ಗಲ್ಲುಶಿಕ್ಷೆ ವಿಧಿಸಿದೆ.


ಫ್ಲಿಪ್ಕಾರ್ಟ್ ಗ್ರಾಹಕರಿಗೆ ಉಚಿತವಾಗಿ ನೀಡ್ತಿದೆ ಈ ಸೌಲಭ್ಯ

$
0
0

ದೇಶದ ಅತಿದೊಡ್ಡ ಇ-ಕಾಮರ್ಸ್ ಕಂಪನಿ ಫ್ಲಿಪ್ಕಾರ್ಟ್ ಝೀರೋ ಫೀ ಸದಸ್ಯತ್ವ ನೀಡಲು ಫ್ಲಿಪ್ಕಾರ್ಟ್ ಪ್ಲಸ್ ಶುರುಮಾಡಿದೆ. ಫ್ಲಿಪ್ಕಾರ್ಟ್ ಪ್ಲಸ್ ಮೂಲಕ ಅಮೆಜಾನ್ ಪ್ರೈಂನಂತೆ ಗ್ರಾಹಕರಿಗೆ ವಿಶೇಷ ಸೌಲಭ್ಯ ನೀಡುವುದು ಫ್ಲಿಪ್ಕಾರ್ಟ್ ಉದ್ದೇಶವಾಗಿದೆ.ಅಮೆಜಾನ್ ಪ್ರೈಂ ಸದಸ್ಯತ್ವ ಪಡೆಯಲು ಗ್ರಾಹಕರು ಹಣ ನೀಡಬೇಕು. ಆದ್ರೆ ಫ್ಲಿಪ್ಕಾರ್ಟ್ ಸದಸ್ಯತ್ವ ಉಚಿತವಾಗಿದೆ.

ಅಮೆಜಾನ್ ಪ್ರೈಂ ಸದಸ್ಯತ್ವ ಪಡೆಯಲು ವರ್ಷಕ್ಕೆ 999 ರೂಪಾಯಿ ನೀಡಬೇಕು. ಅದ್ರಲ್ಲಿ ತಿಂಗಳ ಸ್ಕೀಂ ಕೂಡ ಇದೆ. ಅಮೆಜಾನ್ ಪ್ರೈಮ್ ನಲ್ಲಿ ಉಚಿತವಾಗಿ ಒಂದೇ ದಿನದಲ್ಲಿ ಡಿಲೆವರಿ, ಡಿಸ್ಕೌಂಟ್ ಸೇಮ್ ಡೇ ಡಿಲೆವರಿ, ಎಕ್ಸ್ ಕ್ಲ್ಯೂಸಿವ್ ಡೀಲ್ಸ್, ಪ್ರೈಂ ವಿಡಿಯೋ, ಮ್ಯೂಸಿಕ್, ಸಿನಿಮಾ ಸೇರಿದಂತೆ ಅನೇಕ ಸೌಲಭ್ಯ ಪಡೆಯುತ್ತಿದ್ದಾರೆ. ಫ್ಲಿಪ್ಕಾರ್ಟ್ ಸದಸ್ಯತ್ವ ಪಡೆದವರು ಕೂಡ ಈ ಎಲ್ಲ ಸೌಲಭ್ಯ ಪಡೆಯಲಿದ್ದಾರೆ. ಫ್ಲಿಪ್ಕಾರ್ಟ್ ಈ ಹಿಂದೆಯೇ ಫ್ಲಿಪ್ಕಾರ್ಟ್ ಪ್ಲಸ್ ಘೋಷಣೆ ಮಾಡಿತ್ತು. ಆದ್ರೆ ಸ್ವಾತಂತ್ರ್ಯ ದಿನದಂದು ಅಧಿಕೃತ ಚಾಲನೆ ನೀಡಿದೆ.

ಫ್ಲಿಪ್ಕಾರ್ಟ್ ಪ್ಲಸ್ ಸದಸ್ಯತ್ವಕ್ಕೆ ಹಣ ಪಾವತಿ ಮಾಡಬೇಕಿಲ್ಲ. ಆಗಸ್ಟ್ 15, 2019 ರವರೆಗೆ ಈ ಸದಸ್ಯತ್ವ ಇರಲಿದೆ. ಮೂರು ಕೋಟಿಗೂ ಹೆಚ್ಚು ಉತ್ಪನ್ನಗಳ ಉಚಿತ ಹಾಗೂ ಶೀಘ್ರ ವಿತರಣೆಯ ಲಾಭವನ್ನು ಗ್ರಾಹಕರು ಪಡೆಯಲಿದ್ದಾರೆ.

250 ರೂಪಾಯಿ ವಸ್ತುಗಳನ್ನು ಖರೀದಿ ಮಾಡಿದಾಗ ನಿಮಗೆ ನಾಣ್ಯ ಸಿಗಲಿದೆ. ಒಂದೇ ಸಮಯದಲ್ಲಿ 10 ನಾಣ್ಯ ಪಡೆಯಬಹುದಾಗಿದೆ. ಈ ನಾಣ್ಯಗಳನ್ನು ಮತ್ತೊಮ್ಮೆ ಶಾಪಿಂಗ್ ಮಾಡುವಾಗ ಬಳಸಬಹುದಾಗಿದೆ.

ರಸ್ತೆ ವಿಭಜಕಕ್ಕೆ ಗುದ್ದಿದ ಬೈಕ್: ಕಿರು ಚಿತ್ರ ನಿರ್ದೇಶಕ, ನಟ ಸಾವು

$
0
0

ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿದ ಬೈಕ್ ರಸ್ತೆ ವಿಭಜಕಕ್ಕೆ ಗುದ್ದಿದ್ದ ಪರಿಣಾಮ ಹಿಂಬದಿ ಕುಳಿತಿದ್ದ ಕಿರು ಚಿತ್ರ ನಿರ್ದೇಶಕ, ನಟ ವಿಶೇಷ ಚೇತನ ಹೇಮಂತ್ ಕುಮಾರ್ ಸಾವನ್ನಪ್ಪಿರುವ ಘಟನೆ ನೆಲಮಂಗಲದಲ್ಲಿ ಸಂಭವಿಸಿದೆ.

32 ವರ್ಷದ ಹೇಮಂತ್ ಕುಮಾರ್, ಮಾಗಡಿ ರಸ್ತೆಯ ಮಾಚೋಹಳ್ಳಿಯ ನಿವಾಸಿಯಾಗಿದ್ದು, ಕೆಲ ಕನ್ನಡದ ಕಿರು ಚಿತ್ರಗಳನ್ನು ನಿರ್ದೇಶಿಸಿ ನಟಿಸಿದ್ದರು. ಹೇಮಂತ್ ಅವರಿಗೆ ಎರಡೂ ಕೈಗಳು ಇರಲಿಲ್ಲ. ಹೀಗಾಗಿ ಬೈಕ್ ಅನ್ನು ಸ್ನೇಹಿತ ವೀರೇಂದ್ರ ಚಲಾಯಿಸುತ್ತಿದ್ದರು.

ವಿರಾಂಜನಿಪುರದ ಬಳಿ ಬರುತ್ತಿದ್ದಾಗ ವೀರೇಂದ್ರ ಬೈಕ್ ನಿಯಂತ್ರಣ ಕಳೆದುಕೊಂಡಿದ್ದಾರೆ. ವೇಗವಾಗಿ ಬರುತ್ತಿದ್ದರಿಂದ ಬೈಕ್ ರಸ್ತೆ ವಿಭಜಕಕ್ಕೆ ಗುದ್ದಿದೆ. ಇಬ್ಬರು ರಸ್ತೆ ಮೇಲೆ ಬಿದ್ದಿದ್ದು ಹೇಮಂತ್ ಕುಮಾರ್ ಅವರ ತಲೆಗೆ ಬಲವಾದ ಗಾಯವಾಗಿದ್ದರಿಂದ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ವೀರೇಂದ್ರ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಭಾರತದಲ್ಲಿ ಮೊದಲ ಬಾರಿ ಜನಿಸ್ತು ಹೆಣ್ಣು ಪೆಂಗ್ವಿನ್

$
0
0

ದೇಶದಲ್ಲಿ ಮೊದಲ ಬಾರಿ ಹೆಣ್ಣು ಪೆಂಗ್ವಿನ್ ಜನನವಾಗಿದೆ. ಮುಂಬೈನ ವಿಜೆಬಿ ಝೂನಲ್ಲಿ ಫೆಂಗ್ವಿನ್ ಜನಿಸಿದೆ. ಸುಮಾರು 40 ದಿನಗಳ ಹಿಂದೆ ಪೆಂಗ್ವಿನ್ ಮೊಟ್ಟೆಯಿಟ್ಟಿತ್ತು. ಬುಧವಾರ ರಾತ್ರಿ ಮೊಟ್ಟೆಯಿಂದ ಹೆಣ್ಣು ಪೆಂಗ್ವಿನ್ ಹೊರ ಬಂದಿದೆ.

2016, ಜುಲೈ 26 ರಂದು ದಕ್ಷಿಣ ಕೋರಿಯಾದಿಂದ 8 ಪೆಂಗ್ವಿನ್ ಗಳನ್ನು ದೇಶಕ್ಕೆ ತರಲಾಗಿತ್ತು. ಇದ್ರಲ್ಲಿ ಒಂದು ಜೋಡಿ ಜುಲೈನಲ್ಲಿ ಮೊಟ್ಟಯಿಟ್ಟಿತ್ತು. 40 ದಿನಗಳಿಂದ ಜೋಡಿ ಪೆಂಗ್ವಿನ್ ಮೊಟ್ಟೆಯನ್ನು ರಕ್ಷಣೆ ಮಾಡುತ್ತಿತ್ತು. ದೇಶದಲ್ಲಿ ಮೊದಲ ಬಾರಿ ಪೆಂಗ್ವಿನ್ ಜನನವಾಗಲಿದೆ ಎಂಬ ನಿರೀಕ್ಷೆ ಹೆಚ್ಚಿತ್ತು.

ಜುಲೈ 5 ರಂದು ಪೆಂಗ್ವಿನ್ ಮೊಟ್ಟೆ ಇಟ್ಟಿತ್ತಂತೆ. ಇದಾದ ನಂತ್ರ ಜೋಡಿ ಪೆಂಗ್ವಿನ್ ಮೊಟ್ಟೆಗಾಗಿ ಗೂಡು ಸಿದ್ಧಪಡಿಸಿದ್ದವಂತೆ. 36 ರಿಂದ 48 ಗಂಟೆಗಳ ಕಾಲ ಮೊಟ್ಟೆ ರಕ್ಷಣೆಗಾಗಿ ಹೆಣ್ಣು ಪೆಂಗ್ವಿನ್ ಅಲ್ಲಿಯೇ ನಿಲ್ಲುತ್ತಿತ್ತಂತೆ. ಆದಾಗ್ಯೂ ಮೊಟ್ಟೆಯಲ್ಲಿ ಭ್ರೂಣವಿಲ್ಲದೆ ಹೋದ್ರೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದರು. ಕೆಲವೊಮ್ಮೆ ಮೊಟ್ಟೆ ಆರೈಕೆ ಸರಿಯಾಗಿಲ್ಲವೆಂದಾದ್ರೆ ಮರಿ ಸರಿಯಾಗಿ ಜನಿಸುವುದಿಲ್ಲ. ಆದ್ರೆ ಪೆಂಗ್ವಿನ್ ಗಳ ಆರೈಕೆಯಿಂದ ಸರಿಯಾದ ಮರಿ ಜನಿಸಿದೆ.

ಶಾಲಾ ಶಿಕ್ಷಕಿಯನ್ನೂ ಬಿಡಲಿಲ್ಲ ಸಲ್ಮಾನ್ ಖಾನ್…!

$
0
0

ಬಾಲಿವುಡ್ ನಟ ಸಲ್ಮಾನ್ ಖಾನ್ ಶಾಲಾ ದಿನಗಳಲ್ಲಿ ಶಿಕ್ಷಕಿಯ ಪ್ರೀತಿಗೆ ಬಿದ್ದಿದ್ದರಂತೆ. ಫ್ಲರ್ಟ್ ಮಾಡ್ತಿದ್ದ ಸಲ್ಮಾನ್ ಈ ವಿಚಾರವನ್ನು ದಸ್ ಕಾ ದಮ್ ವೀಕೆಂಡ್ ಎಪಿಸೋಡ್ ನಲ್ಲಿ ಹೇಳಿದ್ದಾರೆ.

ಶಾಲೆ ದಿನಗಳ ಫ್ಲರ್ಟ್ ವಿಚಾರದ ಬಗ್ಗೆ ಮಾತನಾಡಿದ ಸಲ್ಮಾನ್ ಖಾನ್, ಶಿಕ್ಷಕಿಯ ಪ್ರೀತಿಗೆ ಬಿದ್ದಿದ್ದೆ. ಅವ್ರನ್ನು ಮನೆಯವರೆಗೆ ಸೈಕಲ್ ನಲ್ಲಿ ಡ್ರಾಪ್ ಮಾಡ್ತಿದ್ದೆ ಎಂದು ಸಲ್ಮಾನ್ ಹೇಳಿದ್ದಾರೆ. ಶಾಲಾ ದಿನಗಳಲ್ಲಿ ಶಿಕ್ಷಕಿ ಪ್ರೀತಿ ಮಾಡದೆ ಇರುವ ವ್ಯಕ್ತಿಗಳಿಲ್ಲ. ಕೆಲವರು ಹೇಳಿಕೊಳ್ಳೋದಿಲ್ಲ. ನಾನು ಹೇಳ್ತಿದ್ದೇನೆ ಎಂದು ಸಲ್ಮಾನ್ ಹೇಳಿದ್ದಾರೆ.

ಸಲ್ಮಾನ್ ಖಾನ್ ಭಾರತ್ ಚಿತ್ರದ ಶೂಟಿಂಗ್ ನಡೆಸುತ್ತಿದ್ದಾರೆ. ಜೊತೆಗೆ ಟಿವಿ ಶೋ ದಸ್ ಕಾ ದಮ್ ನಲ್ಲಿ ಕಾಣಿಸಿಕೊಳ್ತಿದ್ದಾರೆ. ಬಿಗ್ ಬಾಸ್ ಶೋ ಕೂಡ ಸೆಪ್ಟೆಂಬರ್ ಅಥವಾ ಅಕ್ಟೋಬರ್ ನಲ್ಲಿ ಶುರುವಾಗಲಿದೆ. ಈ ಶೋ ನ ನಿರೂಪಣೆಯನ್ನೂ ಸಲ್ಮಾನ್ ಮಾಡಲಿದ್ದಾರೆ.

ಮಾಜಿ ಪ್ರಧಾನಿ ನಿಧನ ಹಿನ್ನಲೆ: ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡಿಕೆ

$
0
0

ಬೆಂಗಳೂರು: ಆ.29 ರಂದು ನಿಗದಿಯಾಗಿದ್ದ 105 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ 2 ದಿನ ಮುಂದೂಡಲಾಗಿದ್ದು, ಆ.31ರಂದು ನಡೆಯಲಿದೆ. ಸೆ.3ಕ್ಕೆ ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ನಿಧನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಆ.17 ರಂದು ಸರ್ಕಾರಿ ರಜೆ ಘೋಷಣೆ ಮಾಡಿದ್ದರಿಂದ ಆಯೋಗ ಸ್ಥಳೀಯ ಸಂಸ್ಥೆಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದೆ.

ಆ.18 ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದ್ದು, ನಾಮಪತ್ರ ಪರಿಶೀಲನೆ ಆ.20 ರಂದು ನಡೆಯಲಿದೆ. ನಾಮಪತ್ರ ವಾಪಸ್‌ ಪಡೆಯಲು ಆ.23 ಕೊನೆ ದಿನ. ಆ.31 ರಂದು ಬೆಳಿಗ್ಗೆ 7ರಿಂದ ಸಂಜೆ ಗಂಟೆ ತನಕ ಮತದಾನ ನಡೆಯಲಿದೆ. ಮರು ಮತದಾನದ ಅಗತ್ಯವಿದ್ದಲ್ಲಿ ಸೆ.2 ರಂದು ನಡೆಯಲಿದೆ. ಸೆ.3ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

ತಂದೆ-ತಾಯಿ ಮದುವೆಗೂ ಮುನ್ನವೆ ಜನಿಸಿದ್ರು ನಟಿ ರೇಖಾ

$
0
0

ಬಾಲಿವುಡ್ ನಟಿ ರೇಖಾ ಬದುಕು ಒಂದು ರಹಸ್ಯ ಪುಸ್ತಕ. ಪುಟ ತೆರೆದಂತೆ ಅನೇಕ ಆಶ್ಚರ್ಯಕಾರಿ ಸಂಗತಿಗಳು ಹೊರ ಬರ್ತವೆ. ರೇಖಾ ಬಾಲಿವುಡ್ ನಿಂದ ದೂರವಿದ್ದಾರೆ. ಹಾಗಂತ ಅವ್ರ ಪ್ರಸಿದ್ಧಿ ಕಡಿಮೆಯಾಗಿಲ್ಲ. ರೇಖಾ ಯಾವುದೇ ಕಾರ್ಯಕ್ರಮಕ್ಕೆ ಬಂದ್ರೂ ಅವ್ರೇ ಹೈಲೆಟ್. ಈಗಿನ ನಟಿಯರನ್ನು ನಾಚಿಸುವ ಸೌಂದರ್ಯ ಹಾಗೂ ಫ್ಯಾಶನ್ ಮೂಲಕ ರೇಖಾ ಸುದ್ದಿಯಾಗ್ತಾರೆ.

ರೇಖಾ ಜನಿಸಿದ್ದು ಅಕ್ಟೋಬರ್ 10,1954 ರಲ್ಲಿ. ಚೆನ್ನೈನಲ್ಲಿ ತಮಿಳು ನಟಿ ಪುಷ್ಪವಲ್ಲಿ ರೇಖಾಗೆ ಜನ್ಮ ನೀಡಿದ್ದರು. 50ರ ದಶಕದಲ್ಲಿ ನಟಿಯಾದ ರಸಾಯನಶಾಸ್ತ್ರ ಅಧ್ಯಾಪಕಿ ಪುಷ್ಪವಲ್ಲಿ ನಟ ಜೆಮಿನಿ ಗಣೇಶನ್ ಪ್ರೀತಿ ಮಾಡ್ತಿದ್ದರು. ಮದುವೆಗೆ ಮುನ್ನವೇ ರೇಖಾ ಜನಿಸಿದ್ದರಂತೆ. ರೇಖಾ ತಂದೆ ಜೊತೆ ಒಳ್ಳೆ ಸಂಬಂಧ ಹೊಂದಿರಲಿಲ್ಲ. 14 ವರ್ಷದಲ್ಲಿಯೇ ನಟನೆ ಶುರು ಮಾಡಿದ್ದ ರೇಖಾ ತುಂಬಾ ದಪ್ಪ ಹಾಗೂ ಕಪ್ಪಗಿದ್ದರು.

1969ರಲ್ಲಿ ರೇಖಾ ಮೊದಲ ಚಿತ್ರದಲ್ಲಿ ನಟಿಸಿದ್ದರು. ಚಿತ್ರೀಕರಣ ಮುಗಿದ 8 ವರ್ಷಗಳ ನಂತ್ರ ಚಿತ್ರ ತೆರೆಗೆ ಬಂದಿತ್ತು. ಚಿತ್ರದಲ್ಲಿ ರೇಖಾಗೆ ಹೇಳದೆ ಕಿಸ್ಸಿಂಗ್ ದೃಶ್ಯವನ್ನು ನಿರ್ದೇಶಕರು ಶೂಟ್ ಮಾಡಿದ್ರು. ಇದು ರೇಖಾ ಅಳಲು ಕಾರಣವಾಗಿತ್ತು. ಒಂದು ಹಿಂದಿ ಶಬ್ಧವನ್ನೂ ತಿಳಿದಿರದ ರೇಖಾ ಒಂದಾದ ಮೇಲೆ ಒಂದರಂತೆ ಅದ್ಬುತ ಚಿತ್ರಗಳಲ್ಲಿ ನಟಿಸಿದ್ರು. ಉರ್ದು ಪದವನ್ನು ಸ್ವಚ್ಛವಾಗಿ ಉಚ್ಛರಿಸಿ ಭೇಷ್ ಎನ್ನಿಸಿಕೊಂಡಿದ್ದರು.

ಪುಷ್ಪ ಪ್ರದರ್ಶನಕ್ಕೆ ಹರಿದು ಬಂದ ಜನಸಾಗರ

$
0
0

ಬೆಂಗಳೂರು: ಸಸ್ಯ ಕಾಶಿ ಲಾಲ್ ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನದ ಕೊನೆಯ ದಿನವಾದ ಆ.15 ರಂದು ಲಾಲ್‌ಬಾಗ್‌ ಮೆಟ್ರೊ ನಿಲ್ದಾಣದ ಮೂಲಕ 37,536 ಮಂದಿ ಪ್ರಯಾಣಿಸಿದ್ದಾರೆ. ಸಾಮಾನ್ಯವಾಗಿ ವಾರಾತ್ಯಂತದಲ್ಲಿ ಮಾತ್ರ ಈ ಪ್ರಮಾಣದಲ್ಲಿ ಮೆಟ್ರೋ ಬಳಸುತ್ತಿದ್ದ ಜನರು ಸ್ವಾತಂತ್ರ್ಯ ದಿನಾಚರಣೆ ದಿನವಾದ ವಾರದ ನಡು ದಿನದಲ್ಲಿಯೇ ದಾಖಲೆ ಪ್ರಮಾಣದಲ್ಲಿ ಮೆಟ್ರೋ ಬಳಸಿರುವುದು ವಿಶೇಷವಾಗಿತ್ತು.

ಟಿಕೆಟ್‌ ಖರೀದಿ ವೇಳೆ ನೂಕುನುಗ್ಗಲು ಉಂಟಾಗಬಾರದು ಎಂಬ ದೃಷ್ಟಿಯಿಂದ ಲಾಲ್ ಬಾಗ್ ನಿಲ್ದಾಣದಿಂದ ಬೇರೆ ಕಡೆ ಪ್ರಯಾಣಿಸುವವರಿಗೆ ಬೆಂಗಳೂರು ಮೆಟ್ರೊ ರೈಲು ನಿಗಮವು ಪೇಪರ್‌ ಟಿಕೆಟ್‌ ವ್ಯವಸ್ಥೆ ಮಾಡಿತ್ತು. ಬುಧವಾರ ಒಂದೇ ದಿನ 23,874 ಮಂದಿ ಪೇಪರ್‌ ಟಿಕೆಟ್‌ ಖರೀದಿಸಿದ್ದಾರೆ. ಜನದಟ್ಟಣೆ ಹೆಚ್ಚು ಇದ್ದುದರಿಂದ, ಸಿಬ್ಬಂದಿ ಬಳಕೆ ಸೀಮಿತವಾದ ಪ್ರವೇಶ ದ್ವಾರಗಳನ್ನೂ ಪ್ರಯಾಣಿಕರಿಗಾಗಿ ತೆರೆಯಲಾಗಿತ್ತು.

ಕೊನೆಯ ದಿನದ ಪುಷ್ಪ ಪ್ರದರ್ಶನಕ್ಕೆ ದಾಖಲೆಯ ಜನಸಾಗರವೇ ಹರಿದು ಬಂದಿದ್ದು, 12 ದಿನಗಳವರೆಗೆ ನಡೆದ ಪ್ರದರ್ಶನದಲ್ಲಿ ಒಟ್ಟು 1.76 ಲಕ್ಷ ಜನ ಭೇಟಿ ನೀಡಿದ್ದು, 2.36 ಕೋಟಿ ಶುಲ್ಕ ಸಂಗ್ರಹವಾಗಿದೆ.

ಇನ್ನು ಲಾಲ್ ಬಾಗ್ ನಲ್ಲಿ ಸಂಗ್ರಹವಾದ ತ್ಯಾಜ್ಯ ಸಂಗ್ರಹ ಕೂಡ ಯಥೇಚ್ಛವಾಗಿದ್ದು, ಬುಧವಾರ ಒಂದೇ ದಿನ 2 ಟನ್‌ ತ್ಯಾಜ್ಯ ಸಂಗ್ರಹವಾಗಿದೆ ಎಂದು ತೋಟಗಾರಿಕೆ ಇಲಾಖೆಯ ನಿರ್ದೇಶಕ ಚಂದ್ರಶೇಖರ್‌ ತಿಳಿಸಿದ್ದಾರೆ.


ಹಿಂದಿಯಲ್ಲಿಯೇ ಇಂಜಿನಿಯರಿಂಗ್ ಬೋಧಿಸಲಾಗುತ್ತೆ ಅಟಲ್ ಜಿ ಹೆಸರಿನ ಈ ವಿಶ್ವವಿದ್ಯಾಲಯದಲ್ಲಿ…!

$
0
0

ಭೋಪಾಲ್: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೆಸರಲ್ಲಿರುವ ಮಧ್ಯಪ್ರದೇಶದ ಭೋಪಾಲ್​ನ ಈ ವಿಶ್ವವಿದ್ಯಾನಿಯಯದಲ್ಲಿ ಕೇವಲ ಹಿಂದಿ ಭಾಷೆಯಲ್ಲೇ ಇಂಜಿನಿಯರಿಂಗ್​ ಬೋಧಿಸಲಾಗುತ್ತದೆ ಎಂಬುದು ವಿಶೇಷ.

ಭೋಪಾಲ್​ನ ಮುಗಲಿಯಾ ಕೋಟ್​ನಲ್ಲಿರುವ ಈ ಹಿಂದಿ ವಿಶ್ವವಿದ್ಯಾಲಯ 2013ರಲ್ಲಿ ಆರಂಭವಾಯಿತು. ಅಂದಿನಿಂದ ಇಲ್ಲಿ ಹಿಂದಿ ಭಾಷೆಯಲ್ಲಿ ಎಂಜಿನಿಯರಿಂಗ್ ಪದವಿ ನೀಡಲಾಗುತ್ತಿದೆ. ಆರಂಭದಲ್ಲಿ ಇಲ್ಲಿ 90 ಸೀಟುಗಳನ್ನು ಕಾಯ್ದಿರಿಸಲಾಗಿತ್ತು. ಆದರೀಗ ಈ ವಿಶ್ವವಿದ್ಯಾನಿಲಯಕ್ಕೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಸಂಗಕ್ಕೆ ಬರುತ್ತಿದ್ದಾರೆ.

ಹಿಂದಿಯಲ್ಲಿ ಇಂಜಿನಿಯರಿಂಗ್​ ಪಠ್ಯಕ್ರಮವನ್ನು ಎಲ್ಲಾ ಸಿದ್ಧತೆಗಳೊಂದಿಗೆ ಆರಂಭಿಸಿದ್ದು, ಅಂತೆಯೇ ಮೆಕ್ಯಾನಿಕಲ್​, ಸಿವಿಲ್ ಹಾಗೂ ಇಲೆಕ್ಟ್ರಿಕಲ್​ ವಿಭಾಗಗಳಿಗೆ ಇಂಜಿನಿಯರಿಂಗ್​ ಹಾಗೂ ಡಿಪ್ಲೊಮಾಗೆ ಪ್ರವೇಶಾತಿಯನ್ನೂ ಆರಂಭಿಸಿದೆ.

ವಿಶ್ವವಿದ್ಯಾನಿಲಯದ ಕುಲಪತಿಯಾದ ಪ್ರೊ. ಮೋಹನ್​ಲಾಲ್​ ಹೇಳುವ ಪ್ರಕಾರ, ಸುಮಾರು 250 ಇಂಜಿನಿಯರಿಂಗ್​ ಹಾಗೂ ಮೆಡಿಕಲ್​ ಕಾಲೇಜುಗಳಲ್ಲಿ ಆಂಗ್ಲ ಭಾಷೆಯ ಸಾಮ್ರಾಜ್ಯವಿದೆ. ಹೀಗಿರುವಾಗ ಹಿಂದಿ ಮಾಧ್ಯಮದಲ್ಲಿ ಇಂಜಿನಿಯರಿಂಗ್ ಭೋದಿಸುವ ಪ್ರಯತ್ನ ಮಾಡುತ್ತಿದ್ದೇವೆ ಎನ್ನುತ್ತಾರೆ.

ಕೇರಳ ಪ್ರವಾಹ ಪೀಡಿತ ಜನರಿಗೆ ಹೀಗೆ ನೆರವಾಗ್ತಿದೆ ಟೆಲಿಕಾಂ ಕಂಪನಿಗಳು

$
0
0

ಪ್ರವಾಹಕ್ಕೆ ಕೇರಳ ಕೊಚ್ಚಿ ಹೋಗಿದೆ. ಕೇರಳದಲ್ಲಿ ಬಿರುಗಾಳಿ ಸಮೇತ ಭಾರೀ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ರಾಜ್ಯದ ಅನೇಕ ಪ್ರದೇಶಗಳು ಜಲಾವೃತಗೊಂಡಿವೆ. 67ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಸಾವಿರಾರು ಮಂದಿ ನಿರಾಶ್ರಿತರಾಗಿದ್ದು, ನೂರಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.

ಪ್ರವಾಹದಿಂದ ತತ್ತರಿಸಿರುವ ಕೇರಳ ಜನರಿಗೆ ಟೆಲಿಕಾಂ ಕಂಪನಿಗಳು ನೆರವಿನ ಹಸ್ತ ಚಾಚಿವೆ. ಏರ್ಟೆಲ್ ಪ್ರೀಪೇಯ್ಡ್ ಗ್ರಾಹಕರಿಗೆ ಉಚಿತ ಡೇಟಾ ಹಾಗೂ 30 ರೂಪಾಯಿ ಮೌಲ್ಯದ ಟಾಕ್ ಟೈಂ ಉಚಿತವಾಗಿ ನೀಡ್ತಿದೆ. ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಬಿಲ್ ಪಾವತಿ ದಿನಾಂಕವನ್ನು ವಿಸ್ತರಿಸಿದೆ.

ಇದ್ರ ಜೊತೆಗೆ ಏರ್ಟೆಲ್, ತೊಂದರೆಗೊಳಗಾದ ಗ್ರಾಹಕರಿಗೆ ಉಚಿತ ವೈಫೈ ಹಾಗೂ ಕರೆ ಸೌಲಭ್ಯವನ್ನು ನೀಡ್ತಿದೆ. ಏರ್ಟೆಲ್ ಸ್ಟೋರ್ ಗಳಲ್ಲಿ ಬ್ಯಾಟರಿ ಚಾರ್ಜ್ ಗೆ ಅವಕಾಶ ಮಾಡಿಕೊಡ್ತಿದೆ. ಇದಲ್ಲದೆ ಜಿಯೋ ಕೂಡ ಗ್ರಾಹಕರ ನೆರವಿಗೆ ಮುಂದಾಗಿದೆ. ಉಚಿತ ಡೇಟಾ ಹಾಗೂ ಕರೆ ನೀಡುವ ಘೋಷಣೆ ಮಾಡಿದೆ.

ಜಿಯೋ, ಏರ್ಟೆಲ್ ನಂತೆ ವೊಡಾಫೋನ್ ಕೂಡ ತನ್ನೆಲ್ಲ ಪ್ರೀಪೇಯ್ಡ್ ಗ್ರಾಹಕರಿಗೆ 30 ರೂಪಾಯಿ ಮೌಲ್ಯದ ಟಾಕ್ ಟೈಂ ಉಚಿತವಾಗಿ ನೀಡ್ತಿದೆ. ಇದನ್ನು ಆ್ಯಕ್ಟಿವ್ ಮಾಡಲು ಗ್ರಾಹಕರು CREDIT ಎಂದು ಟೈಪ್ ಮಾಡಿ 144  ನಂಬರ್ ಗೆ ಎಸ್ಎಂಎಸ್ ಮಾಡಬೇಕು.

 

ವೈರಲ್ ಆಯ್ತು ‘ಯಾರು ಮಿಲೇನಿಯರ್?’ಸ್ಪರ್ಧೆಯ ಉತ್ತರ

$
0
0

ಟರ್ಕಿಯ ಟಿವಿ ವಾಹಿನಿಯೊಂದರ ಯಾರು ಮಿಲೇನಿಯರ್ ಸ್ಪರ್ಧೆಯಲ್ಲಿ ಕಂಟೆಸ್ಟೆಂಟ್ ನೀಡಿದ ಉತ್ತರಕ್ಕೆ ಈಗ ವಿಶ್ವದಾದ್ಯಂತ ಪ್ರತಿಕ್ರಿಯೆಗಳು ಬರಲಾರಂಭಿಸಿವೆ.

ಕಳೆದ ವಾರ ನಡೆದ ಸ್ಪರ್ಧೆಯಲ್ಲಿ ಗ್ರೇಟ್ ವಾಲ್ ಆಫ್ ಚೀನಾ ಎಂಬ ಎಲ್ಲಿದೆ ಎಂಬ ಪ್ರಶ್ನೆಗೆ ಸ್ಪರ್ಧಾಳು ಎರಡು ಲೈಫ್ ಲೈನ್ ಬಳಸಿಕೊಂಡಿದ್ದರು. ಇದಾಗಿ ಒಂದು ವಾರಕ್ಕೆ ಹಾಸ್ಯ ಕಲಾವಿದರಾದ ಇವಾನ್ ಕೌಮನ್ ಸ್ಪರ್ಧೆಯಾಗಿದ್ದ ಸುತ್ತಿನಲ್ಲಿ ಒಬಾಮ ಯಾರ ಹೆಸರಿನ ಕೊನೆಯಲ್ಲಿದೆ ಎಂಬ ಪ್ರಶ್ನೆ ಬಂದಿತ್ತು.

ಈ ಪ್ರಶ್ನೆಗೆ ಸ್ಪರ್ಧಾಳು ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಮತ್ತು ಅಲ್ ಖೈದಾ ನಾಯಕ ಬಿನ್ ಲಾಡೆನ್ ಹೆಸರಿನಲ್ಲಿ ಗೊಂದಲ ಮಾಡಿಕೊಂಡಿದ್ದರು. ಅವರು ನೀಡಿದ ಉತ್ತರದ ವಿಡಿಯೋ ತುಣುಕು ವೈರಲ್ ಆಗಿದ್ದು, 2.5 ಲಕ್ಷ ವೀಕ್ಷಣೆಯಾಗಿದೆ.

 

ಸ್ಪಾನಲ್ಲಿ ನಡೆಯುತ್ತಿತ್ತು ದೇಹ ವ್ಯಾಪಾರ

$
0
0

ಹರ್ಯಾಣದ ಗುರ್ಗ್ರಾಮ್ ನ ಸ್ಪಾ ಸೆಂಟರ್ ನಲ್ಲಿ ನಡೆಯುತ್ತಿದ್ದ ಸೆಕ್ಸ್ ರಾಕೆಟ್ ಬಣ್ಣ ಬಯಲಾಗಿದೆ. ಸ್ಪಾ ಸೆಂಟರ್ ಮೇಲೆ ದಾಳಿ ನಡೆಸಿದ ಪೊಲೀಸರು ಐವರು ಹುಡುಗಿಯರ ಸಮೇತ ಇಬ್ಬರು ಗ್ರಾಹಕರನ್ನು ವಶಕ್ಕೆ ಪಡೆದಿದ್ದಾರೆ.

ಎಂ.ಜಿ. ರಸ್ತೆಯಲ್ಲಿರುವ ಎಮ್ಜಿಎಫ್ ಮೆಗಾ ಮಾಲ್ ನ ಬ್ಯೂಟಿ ಎಂಡ್ ಸ್ಪಾ ಸೆಂಟರ್ ನಲ್ಲಿ ದೇಹ ವ್ಯಾಪಾರ ನಡೆಯುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಪೊಲೀಸರು ತಂಡವೊಂದನ್ನು ರಚಿಸಿ ಪ್ಲಾನ್ ಮೂಲಕ ಸ್ಪಾ ಮೇಲೆ ದಾಳಿ ನಡೆಸಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

ಗುರುಗ್ರಾಮ್ ನಲ್ಲಿ ಇಂಥ ದಂಧೆ ಮೇಲೆ ಕಠಿವಾಣ ಹಾಕಲು ಪೊಲೀಸರು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ಆದ್ರೆ ನಗರದ ಅನೇಕ ಕಡೆ ಸ್ಪಾ, ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ದೇಹ ವ್ಯಾಪಾರ ನಡೆಯುತ್ತಿದೆ.

ಸಾವು ಗೆದ್ದು ಬಂದ ಮೀನುಗಾರ

$
0
0

ಮಂಗಳೂರು: ಮೀನುಗಾರಿಕೆಗೆ ಹೊರಟಿದ್ದ ಬೋಟ್‍ನಿಂದ ಸಮುದ್ರಕ್ಕೆ ಬಿದ್ದಿದ್ದ ತಮಿಳುನಾಡು ಮೂಲದ ಮೀನುಗಾರ ಬರೋಬ್ಬರಿ 6 ಗಂಟೆಗಳ ಕಾಲ ನೀರಿನಲ್ಲಿಯೇ ಈಜಾಡಿ ಸಾವನ್ನ ಗೆದ್ದು ಬಂದಿದ್ದಾರೆ.

ಗುರುವಾರ ಬೆಳಗ್ಗೆ ಮೀನುಗಾರಿಕೆಗೆ ಹೋಗಿದ್ದಾಗ ಬೋಟ್‍ನಲ್ಲಿದ್ದ ನಾಗರಾಜ್ ಆಯತಪ್ಪಿ ಸಮುದ್ರಕ್ಕೆ ಬಿದ್ದಿದ್ದಾರೆ. 40 ಬೋಟ್ ಗಳಲ್ಲಿ ಸಮುದ್ರದಲ್ಲಿ ಹುಡುಕಾಟ ನಡೆಸಿದರೂ ನಾಗರಾಜ್ ಸುಳಿವು ಸಿಕ್ಕಿರಲಿಲ್ಲ.

ಅಂತಿಮವಾಗಿ ಎನ್‍ಎಂಪಿಟಿ ಯಿಂದ ಹೊರಟ ಕೋಸ್ಟ್ ಗಾರ್ಡ್ ನೌಕೆಯವರು ನಾಗರಾಜ್ ಬಿದ್ದ ಸ್ಥಳದಲ್ಲಿ ಹುಡುಕಾಡಿ ನಾಗರಾಜ್ ನನ್ನು ಪತ್ತೆ ಹಚ್ಚಿ ರಕ್ಷಿಸಿ ನವಮಂಗಳೂರಿಗೆ ಕರೆತಂದಿದ್ದಾರೆ. ಸಮುದ್ರದಲ್ಲಿ ಸುಮಾರು 6 ಗಂಟೆಗಳ ಕಾಲ ಪ್ರಾಣ ರಕ್ಷಣೆಗೆ ಈಜಿರುವ ನಾಗರಾಜ್ ಅದೃಷ್ಟವಶಾತ್ ಸಾವನ್ನೇ ಜಯಿಸಿ ಬಂದಿದ್ದಾರೆ.

ಬ್ಯೂಟಿ ಕ್ವೀನ್ ಜತೆ ಸುತ್ತಿದ್ದಕ್ಕೆ ಸಚಿವ ಸ್ಥಾನಕ್ಕೆ ಸಂಚಕಾರ

$
0
0

ನಾರ್ವೆ ಮೀನುಗಾರಿಕೆ ಸಚಿವ ಭದ್ರತಾ ನಿಯಮ ಧಿಕ್ಕರಿಸಿ ಇರಾನ್ ಗೆ ರಜಾ ದಿನ ಕಳೆಯಲು ಹೋಗಿ ಸಿಕ್ಕಿಬಿದ್ದಿದ್ದಾರೆ. ಜತೆಗೆ ಬ್ಯೂಟಿ ಕ್ವೀನ್ ಜತೆ ಅವರು ಪ್ರವಾಸ ನಡೆಸಿರುವ ಫೋಟೋ ವೈರಲ್ ಆಗಿದ್ದು, ಈ ಕಾರಣಕ್ಕೆ ಸಚಿವ ಸ್ಥಾನಕ್ಕೆ ಕುತ್ತು ತಂದುಕೊಂಡಿದ್ದಾರೆ.

58 ವಯಸ್ಸಿನ ಸಚಿವ ಸ್ಯಾಂಡ್ ಬರ್ಗ್ 28ರ ಹರೆಯದ ಸುಂದರಿ, ಹೊಸ ಗೆಳತಿ ಬಹರೆಹ್ ಲೆಟೆನ್ಸ್ ಜತೆ ರಜಾ ದಿನ ಕಳೆಯಲು ಹೋಗಿದ್ದಲ್ಲದೇ, ತಾವು ರಜಾ ದಿನ ಕಳೆಯಲು ಹೋಗುವ ವಿಚಾರವನ್ನು ಅಲ್ಲಿನ ಪ್ರಧಾನಿ ಕಚೇರಿಗೂ ತಿಳಿಸಿರಲಿಲ್ಲ.

ರಷ್ಯಾ, ಚೀನಾವನ್ನು ನಾರ್ವೆ ಗುಪ್ತಚರ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಆ ದೇಶಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಇರಾನ್ ಗೆ ತಮ್ಮ ದೇಶದ ಸಚಿವರು ಸರ್ಕಾರದ ದೂರವಾಣಿ ಸಹಿತ ಹೋಗಿದ್ದನ್ನೂ ಸಹ ಗುಪ್ತಚರ ಇಲಾಖೆ ಗಂಭೀರವಾಗಿ ಪರಿಗಣಿಸಿತು.

ಅಷ್ಟೇ ಅಲ್ಲದೇ ಪ್ರತಿಪಕ್ಷಗಳು ಮತ್ತು ಸ್ವಪಕ್ಷೀಯರಿಂದಲೇ ಈ ಬೆಳವಣಿಗೆ ಬಗ್ಗೆ ಆಕ್ಷೇಪ ತೀವ್ರಗೊಂಡ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ಸ್ಯಾಂಡ್ ಬರ್ಗ್ ರಾಜೀನಾಮೆ ಸಲ್ಲಿಸಿದ್ದಾರೆ. ಅವರು ಇರಾನ್ ನಲ್ಲಿ ಬ್ಯೂಟಿ ಕ್ವೀನ್ ಜತೆಗೆ ಸುತ್ತಾಡಿದ ಅನೇಕ ಚಿತ್ರಗಳು ಸಾಮಾಜಿಕ ತಾಣದಲ್ಲಿ ಸದ್ದು ಮಾಡಿವೆ.

ಕೇರಳಕ್ಕೆ ತ.ನಾಡಿನಿಂದ ರೈಲಿನಲ್ಲಿ ಕುಡಿಯುವ ನೀರು

$
0
0

ಚೆನ್ನೈ: ಜಲಪ್ರಳಯಕ್ಕೆ ತುತ್ತಾಗಿರುವ ಕೇರಳ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿದೆ. ಈ ಸಂದರ್ಭದಲ್ಲಿ ಭಾರತೀಯ ರೈಲ್ವೆ ತಮಿಳುನಾಡಿನಿಂದ ನೀರು ಸರಬರಾಜು ಆರಂಭಿಸಿದೆ.

ರೈಲ್ವೆಯ ದಕ್ಷಿಣ ಚೆನ್ನೈ ಮತ್ತು ಸೇಲಂ ವಿಭಾಗದಿಂದ ನೀರು ಸಾಗಿಸಲು ರೈಲುಗಳನ್ನು ಈ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದ್ದು, ಶುಕ್ರವಾರ ಸಂಜೆ 2.8 ಲಕ್ಷ ಲೀಟರ್ ನೀರು ರವಾನೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ವೇಳೆ ನೀರು ಸಾಗಿಸುವುದಕ್ಕೂ ಮಾರ್ಗ ಸಮಸ್ಯೆ ಉಂಟಾಗಿದ್ದು, ಪಾಲ್ಗಾಟ್ ಬದಲು ದಿಂಡಕ್ಕಲ್, ಮಧುರೈ ಮಾರ್ಗವಾಗಿ ರೈಲು ಪ್ರಯಾಣ ಬೆಳೆಸಿದೆ. 10 ಸಾವಿರ ಲೀಟರ್ ಸಾಮರ್ಥ್ಯದ ಪ್ಲಾಸ್ಟಿಕ್ ಟ್ಯಾಂಕರ್ ಗಳನ್ನು ಬಳಸಿಕೊಂಡು ನೀರು ಕಳಿಸಲಾಗಿದೆ. ಇದೇ ವೇಳೆ ಇನ್ನಷ್ಟು ಪ್ರಮಾಣದಲ್ಲಿ ನೀರು ಕಳಿಸುವ ಬಗ್ಗೆ ರೈಲ್ವೆ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ. ಕೇರಳದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಸಂತ್ರಸ್ತರನ್ನು ಕಾಪಾಡಲು ರೈಲ್ವೆ ವಿಶೇಷ ಪ್ರಯತ್ನ ನಡೆಸಿದೆ.


ತುಂಗಭದ್ರಾ ಜಲಾಶಯದಿಂದ ನೀರು ಬಿಡುಗಡೆ: 3 ಜಿಲ್ಲೆಗಳಲ್ಲಿ ಪ್ರವಾಹ

$
0
0

ಕೊಪ್ಪಳ: ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, 9 ವರ್ಷಗಳ ಬಳಿಕ ತುಂಗಭದ್ರಾ ಜಲಾಶಯ ಭರ್ತಿಯಾಗಿವೆ. ಈ ಹಿನ್ನಲೆಯಲ್ಲಿ ಜಲಾಶಯದಿಂದ 2 ಲಕ್ಷದ 22 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದ ಮೂರು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ.

ಬಳ್ಳಾರಿ, ರಾಯಚೂರು ಹಾಗೂ ಗದಗ ಜಿಲ್ಲೆಗಳು ಪ್ರವಾಹಕ್ಕೀಡಾಗಿದ್ದು, ಕಂಪ್ಲಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ರಸ್ತೆ ಸಂಪರ್ಕ ಕಡಿತಗೊಂಡಿದೆ. 25ಕ್ಕೂ ಹೆಚ್ಚು ಮನೆಗಳು, ದೇವಾಲಯಗಳು ಜಲಾವೃತವಾಗಿವೆ.ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಳೆ ಶಿಂಗಟಾಲೂರ ಗ್ರಾಮದ 17 ಕುಟುಂಬಗಳು ನಡುಗಡ್ಡೆಯಲ್ಲಿ ಸಿಲುಕಿವೆ. ಈ ನಡುವೆ ನಿರಾಶ್ರಿತರಿಗಾಗಿ 80ಕ್ಕೂ ಹೆಚ್ಚು ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ.

ಇತ್ತ ನದಿ ಪಾತ್ರದ ಹಂಪಿ ಸ್ಮಾರಕಗಳು, ಕೋದಂಡರಾಮ ದೇವಸ್ಥಾನ, ಪುರಂದರದಾಸ ಮಂಟಪ ಜಲಾವೃತವಾಗಿವೆ. ಸಿರುಗುಪ್ಪ ತಾಲೂಕಿನ ಹಲವು ಗ್ರಾಮಗಳಿಗೆ ನದಿ ನೀರು ನುಗ್ಗಿದೆ. ಮಂತ್ರಾಲಯದ ಮಠದ ಮೆಟ್ಟಿಲುಗಳು ತುಂಗಭದ್ರಾ ನೀರಿನಲ್ಲಿ ಮುಳುಗಿವೆ. ಬಿಚ್ಚಾಲಿಯ ರಾಯರ ಏಕ ಶಿಲಾ ವೃಂದಾವನ ಮುಳುಗಡೆಯಾಗಿದೆ.

ಪತ್ನಿ ಜೊತೆಯಲ್ಲಿದ್ದಾಗಲೇ ಯುವತಿ ಮೇಲೆರಗಿದ್ದ ಪತಿ

$
0
0

ಅಮೆರಿಕಾದ ಲಾಸ್ ವೆಗಾಸ್ ನಿಂದ ಡೆಟ್ರಾಯಿಟ್ ಗೆ ತೆರಳುತ್ತಿದ್ದ ವಿಮಾನದಲ್ಲಿ ನಿದ್ರಿಸುತ್ತಿದ್ದ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಡಿ, ಭಾರತೀಯ ಮೂಲದ 35 ವರ್ಷದ ಐಟಿ ಮ್ಯಾನೇಜರ್ ನನ್ನು ಅಪರಾಧಿ ಎಂದು ಘೋಷಿಸಲಾಗಿದೆ.

ಎರಡು ವರ್ಷಗಳಿಂದ ಅಮೆರಿಕಾದಲ್ಲಿ ಕೆಲಸ ಮಾಡುತ್ತಿದ್ದ ಪ್ರಭು ರಾಮಮೂರ್ತಿಗೆ, ಟೆರೆನ್ಸ್ ಬರ್ಗ್ ನ್ಯಾಯಾಲಯ ಡಿಸೆಂಬರ್ 12 ರಂದು ಶಿಕ್ಷೆ ಪ್ರಮಾಣ ಪ್ರಕಟಿಸುವ ಸಾಧ್ಯತೆ ಇದೆ. ಈ ಆರೋಪದಡಿ ರಾಮಮೂರ್ತಿಗೆ ಜೀವಾವಧಿ ಶಿಕ್ಷೆ ಆಗುವ ಸಂಭವ ಇದೆ.

ಸ್ಪಿರಿಟ್ ವಿಮಾನದಲ್ಲಿ ರಾಮಮೂರ್ತಿ ಪ್ರಯಾಣಿಸುವಾಗ ಈ ಕೃತ್ಯ ಎಸಗಿದ್ದಾನೆ ಎಂದು ವರದಿಯಾಗಿದೆ. ಅಲ್ಲದೆ ಘಟನೆಯ ವೇಳೆ ರಾಮಮೂರ್ತಿ ಪತ್ನಿ ಮುಂದಿನ ಸೀಟಿನಲ್ಲಿ ಕುಳಿತುಕೊಂಡಿದ್ದರು ಎಂದು ತಿಳಿದುಬಂದಿದೆ.

ಪ್ರಕರಣದ ವಿಚಾರಣೆಯನ್ನು ನಡೆಸಿದ ಡೆಟ್ರಾಯಿಟ್ ನ್ಯಾಯಾಲಯ, ರಾಮಮೂರ್ತಿಯನ್ನು ದೋಷಿ ಎಂದು ತಿಳಿಸಿದೆ. ವಿಚಾರಣೆಯನ್ನು ಆಲಿಸಿದ ನ್ಯಾಯಾಧೀಶರು ರಾಮಮೂರ್ತಿ ಉದ್ದೇಶಪೂರಕವಾಗಿ ಕೃತ್ಯ ಎಸಗಿದ್ದಾನೆ ಎಂದು ತಿಳಿಸಿದ್ದಾರೆ.

ಇನ್ನು ವಿಮಾನದಲ್ಲಿ ನಿದ್ದೆ ಮಾಡುತ್ತಿದ್ದ ಯುವತಿ ಅತ್ಯಾಚಾರ ಯತ್ನದ ಕುರಿತು ವಿಮಾನ ಸಿಬ್ಬಂದಿಗೆ ದೂರು ನೀಡಿದ್ದರು. ಈ ಬಗ್ಗೆ ರಾಮಮೂರ್ತಿಯನ್ನು ವಿಚಾರಣೆ ನಡೆಸಿದಾಗ, ಗಾಢ ನಿದ್ದೆಗೆ ಜಾರಿದ್ದಾಗಿ ತಿಳಿಸಿದ್ದ. ಎಫ್.ಬಿ.ಐ. ಅಧಿಕಾರಿಗಳು ವಿಚಾರಣೆ ನಡೆಸಿದಾಗ ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದ.

 

72 ನೇ ಸ್ವಾತಂತ್ರ್ಯೋತ್ಸವದಂದು 72 ಕಿ.ಮೀ. ಓಡಿದ ಮಿಲಿಂದ್‌ ಸೋಮನ್‌

$
0
0

ಕೈಯಲ್ಲಿ ರಾಷ್ಟ್ರ ಧ್ವಜ, ಬಿಳಿ ಕಚ್ಚೆ ಕಟ್ಟಿ ರಾಷ್ಟ್ರ ರಾಜಧಾನಿಯಲ್ಲಿ 72 ಕಿ.ಮೀ. ಓಟದ ಮೂಲಕ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗಿದೆ. ಹೀಗೆ ಓಡಿದ್ದು, ರಾಜಕಾರಣಿಗಳಲ್ಲ. ಚಿತ್ರ ನಟ ಮಿಲಿಂದ್‌ ಸೋಮನ್‌.

ಉತ್ತಮ ಜೀವನ ಕ್ರಮ ಅಳವಡಿಸಿಕೊಳ್ಳಬೇಕೆಂಬ ಸಂಕಲ್ಪ ಪ್ರತಿಯೊಬ್ಬರೂ ಮಾಡಬೇಕು. ಈ ಸಂದೇಶವನ್ನು ಸಾರಿ, ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಿಲಿಂದ್‌ ದೆಹಲಿಯ ಸುತ್ತಮುತ್ತ 72 ಕಿ.ಮೀ. ಓಟ ನಡೆಸಿದ್ದಾರೆ. ಬೆಳಗ್ಗೆ 6.30ಕ್ಕೆ ಲೋಧಿಯಿಂದ ಆರಂಭಿಸಿ, ಸಂಜೆ 4.30ರ ವೇಳೆಗೆ ಇಂಡಿಯಾ ಗೇಟ್‌ ಬಳಿ ಮುಕ್ತಾಯಗೊಂಡಿದೆ. ಕೆಲ ಉತ್ಸಾಹಿ ಯುವಕರು ಹಾಗೂ ಮಧ್ಯ ವಯಸ್ಕರೂ ಮಿಲಿಂದ್‌ಗೆ ಸಾಥ್‌ ನೀಡಿದ್ದಾರೆ.

ಉತ್ತಮ ಆರೋಗ್ಯ ಇದ್ದರೆ ಮಾತ್ರ ಸ್ವಾತಂತ್ರ್ಯ. ಆರೋಗ್ಯದ ಬಗ್ಗೆ ಎಲ್ಲರೂ ಕಾಳಜಿ ವಹಿಸಿ ಎಂದು ಮಿಲಿಂದ್‌ ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯ ಕೋರಿದ್ದಾರೆ.

ಮಿಲಿಂದ್‌ ತಾಯಿ, ಅತ್ಯುತ್ತಮ ಯೋಗ ಪಟುವಾಗಿದ್ದು, ತಾಯಂದಿರ ದಿನಕ್ಕೆ ವಿಶೇಷ ಕಾರ್ಯಕ್ರಮ ನೀಡಿದ್ದರು. 90 ಸೆಕೆಂಡ್‌ಗಳ ಕಾಲ ಪ್ಲಂಕ್‌ ಪೋಸ್‌ ನಲ್ಲಿ ಇದ್ದು, ದಾಖಲೆ ಮಾಡಿದ್ದರು. ಕಳೆದ 15 ವರ್ಷದಿಂದ ಪ್ರತಿ ತಿಂಗಳಿಗೆ ಒಂದು ಪ್ರದೇಶಕ್ಕೆ ಚಾರಣ ಹೋಗುತ್ತಿದ್ದಾರೆ ಎಂದು ಮಿಲಿಂದ್‌ ಹೇಳಿದ್ದಾರೆ.

ಇತಿಹಾಸದಲ್ಲಿ ದಾಖಲಾದ ವಾಜಪೇಯಿ ನೋಂದಣಿ ಪುಸ್ತಕ

$
0
0

ಗ್ವಾಲಿಯರ್‌: ರಾಷ್ಟ್ರ ಕಂಡ ಧೀಮಂತ ನಾಯಕರ ಪೈಕಿ ಒಬ್ಬರಾಗಿರುವ ಭಾರತ ರತ್ನ, ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಇನ್ನು ನೆನಪು ಮಾತ್ರ. ಈ ನೆನಪಿನ ಗುಚ್ಛಕ್ಕೆ, ಗ್ವಾಲಿಯರ್‌ನ ಗೋರಖಿ ಶಾಲೆಯೂ ಸೇರಿಕೊಂಡಿದೆ.

ಗೋರಖಿ ಶಾಲೆಯಲ್ಲಿ ನೋಂದಣಿ ಪುಸ್ತಕದಲ್ಲಿ ವಾಜಪೇಯಿ ಇನ್ನೂ ಕಾಣುತ್ತಿದ್ದಾರೆ.
ತಂದೆ ಕೃಷ್ಣ ಬಿಹಾರಿ ವಾಜಪೇಯಿ ಪ್ರಾಂಶುಪಾಲರಾಗಿದ್ದ ಶಾಲೆಯಲ್ಲಿ 8ನೇ ತರಗತಿವರೆಗೆ ಕಲಿತಿದ್ದ ಅಟಲ್‌ ಬಿಹಾರಿ ವಾಜಪೇಯಿ ಅವರ ಹಸ್ತಾಕ್ಷರಗಳಲ್ಲಿದ್ದ ರಿಜಿಸ್ಟ್ರಿ, ವಾಜಪೇಯಿ ಅವರು ಅಜರಾಮರ ಎಂಬುದನ್ನು ಸಾರುತ್ತಿದೆ.

ನೋಂದಣಿ ಪುಸ್ತಕ ಇಂದು ಇತಿಹಾಸದಲ್ಲೇ ಅಗ್ರಸ್ಥಾನ ಪಡೆದುಕೊಂಡಿದ್ದು, 101ನೇ ನಂಬರ್‌ನಲ್ಲಿ ವಾಜಪೇಯಿ ಹೆಸರು ಪುಸ್ತಕದಲ್ಲಿ ಕಾಣಬಹುದಾಗಿದೆ. 1935ರಲ್ಲಿ 6ನೇ ತರಗತಿಯಲ್ಲಿದ್ದ ಪುಟ್ಟ ಬಾಲಕ, ಇಂದು ದೇಶ ಕಂಡ ಅಪ್ರತಿಮ ನಾಯಕನಾಗಿ ಬೆಳೆದು, ಪ್ರತಿಯೊಬ್ಬ ಭಾರತೀಯ ಹೃದಯ ಸಿಂಹಾಸನದಲ್ಲಿ ಆಸೀನರಾಗಿದ್ದಾರೆ.

ಹಾಕಿ, ಕಬಡ್ಡಿ ಆಟಗಾರರಾಗಿದ್ದ ವಾಜಪೇಯಿ, ತಮ್ಮ ಹುಟ್ಟೂರನ್ನು ಅತ್ಯಂತ ಪ್ರೀತಿಸುತ್ತಿದ್ದರು. ಇದೇ ಕಾರಣದಿಂದ 1984 ರಲ್ಲಿ ಗ್ವಾಲಿಯರ್‌ನಲ್ಲಿ ಅವರು ಚುನಾವಣೆ ಸೋತಾಗ ದುಃಖಿತರಾಗಿದ್ದರು. ಈ ಬಳಿಕ ಅವರು ಗ್ವಾಲಿಯರ್‌ನಿಂದ ಚುನಾವಣೆಗೆ ಸ್ಪರ್ಧೆ ಮಾಡಿಲ್ಲ. 2006 ರಲ್ಲಿ ಆರೋಗ್ಯ ಹದಗೆಟ್ಟ ಬಳಿಕ ತನ್ನ ಹುಟ್ಟೂರಿಗೆ ವಾಜಪೇಯಿ ಭೇಟಿ ನೀಡಿಲ್ಲ.

ದೇಸಿ ಶೈಲಿಯಲ್ಲಿ ನಿಕ್ ಕೈಗೆ ಉಂಗುರ ತೊಡಿಸಲಿದ್ದಾಳೆ ಪ್ರಿಯಾಂಕ

$
0
0

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದಾಳೆ. ಒಂದು ಕಡೆ ಭಾರತ್ ಚಿತ್ರ ಕೈಬಿಟ್ಟ ಬಗ್ಗೆ ಸುದ್ದಿಯಾದ್ರೆ ಇನ್ನೊಂದು ಕಡೆ ನಿಕ್ ಜೋನಸ್ ಪ್ರೀತಿ ವಿಚಾರದಲ್ಲಿ ಸದ್ದು ಮಾಡ್ತಿದ್ದಾಳೆ. ಬಾಯ್ ಫ್ರೆಂಡ್ ನಿಕ್ ಜೊತೆ ಮುಂಬೈಗೆ ಬಂದಿರುವ ಪ್ರಿಯಾಂಕ ಶನಿವಾರ ಭಾರತೀಯ ಸಂಪ್ರದಾಯದಂತೆ ನಿಕ್ ಗೆ ಉಂಗುರ ತೊಡಿಸಲಿದ್ದಾಳಂತೆ.

ಪ್ರಿಯಾಂಕ ಹುಟ್ಟುಹಬ್ಬದಂದು ನಿಕ್ ಹಾಗೂ ಪ್ರಿಯಾಂಕಾ ಎಂಗೇಜ್ಮೆಂಟ್ ನಡೆದಿದೆ. ಪ್ರಿಯಾಂಕ ತೊಟ್ಟಿರುವ ಉಂಗುರ ಕೂಡ ಕ್ಯಾಮರಾ ಕಣ್ಣಿಗೆ ಸೆರೆಯಾಗಿದೆ. ಪಿಗ್ಗಿ 2 ಕೋಟಿ ಮೌಲ್ಯದ ಉಂಗುರ ಹಾಕಿಕೊಂಡಿದ್ದಾಳೆಂಬ ಚರ್ಚೆಯೂ ಆಗಿದೆ. ಗುರುವಾರ ಮುಂಬೈಗೆ ಬಂದಿರುವ ನಿಕ್ ಹಾಗೂ ಕುಟುಂಬಸ್ಥರು ಶನಿವಾರ ನಡೆಯಲಿರುವ ಪಾರ್ಟಿಗೆ ಸಿದ್ಧವಾಗ್ತಿದ್ದಾರೆ. ಶನಿವಾರ ಬೆಳಿಗ್ಗೆ ಎಂಗೇಜ್ಮೆಂಟ್ ನಡೆಯಲಿದೆ ಎಂದು ಮೂಲಗಳು ಹೇಳಿವೆ.

ನಿಕ್ ಕುಟುಂಬ ಪ್ರಿಯಾಂಕ ಕುಟುಂಬದ ಜೊತೆ ಮಾತುಕತೆ ನಡೆಸಿದೆ. ಇಂದು ಸಂಜೆ ನಡೆಯುವ ಪಾರ್ಟಿಯಲ್ಲಿ ಇಬ್ಬರು ಅಧಿಕೃತ ಘೋಷಣೆ ಮಾಡಲಿದ್ದಾರೆ ಎನ್ನಲಾಗ್ತಿದೆ. ಬಾಲಿವುಡ್ ನ ಆಪ್ತ ಸ್ನೇಹಿತರಿಗೆ ಪ್ರಿಯಾಂಕ ಈಗಾಗಲೇ ಆಹ್ವಾನ ನೀಡಿದ್ದಾರಂತೆ.

 

Viewing all 122063 articles
Browse latest View live


<script src="https://jsc.adskeeper.com/r/s/rssing.com.1596347.js" async> </script>