Quantcast
Channel: Kannada Dunia | Kannada News | Karnataka News | India News
Viewing all 122063 articles
Browse latest View live

ಭೀಕರ ಅಪಘಾತಕ್ಕೆ ಬೈಕ್ ಸವಾರ ಬಲಿ

$
0
0

ಬೆಂಗಳೂರು: ಮೈಸೂರು ರಸ್ತೆಯಲ್ಲಿ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಓರ್ವ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ನಡೆದಿದೆ.

ಸ್ಯಾಟ್‍ಲೈಟ್ ಬಸ್ ನಿಲ್ದಾಣದ ಬಳಿ ತೆರಳುತ್ತಿದ್ದ ಬೈಕ್ ಗೆ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ ಕೆಳಗೆ ಬಿದ್ದಿದ್ದು, ಲಾರಿ ಆತನ ಮೇಲೆಯೇ ಹರಿದಿದೆ. ಬೈಕ್ ಸವಾರನ ತಲೆ ಛಿದ್ರ ಛಿದ್ರವಾಗಿದ್ದು, ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಮೃತ ಯುವಕನ ಗುರುತು ಪತ್ತೆಯಾಗಿಲ್ಲ.

ಇದೇ ರಸ್ತೆಯಲ್ಲಿ ಇನ್ನೊಂದು ದುರ್ಘಟನೆ ಸಂಭವಿಸಿದ್ದು, ವೇಗವಾಗಿ ಬಂದ ಇಂಡಿಕಾ ಕಾರೊಂದು ಚಾಲಕನ ಅಜಾಗರೂಕತೆಗೆಯಿಂದಾಗಿ ಪಲ್ಟಿಯಾಗಿದೆ. ಕಾರ್ ನಲ್ಲಿದ್ದ ಚಾಲಕ ಸೇರಿ ಇಬ್ಬರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬ್ಯಾಟರಾಯನಪುರ ಸಂಚಾರಿ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.


ಏಷ್ಯಾ ಗೇಮ್ಸ್ ನಲ್ಲಿ ಸ್ಥಾನ ಪಡೆದ 10 ಹೊಸ ಆಟ

$
0
0

ಇಂಡೋನೇಷ್ಯಾದಲ್ಲಿ ಇಂದಿನಿಂದ 18 ನೇ ಏಷ್ಯನ್ ಗೇಮ್ಸ್ ಶುರುವಾಗ್ತಿದೆ. ಈ ಬಾರಿ 10 ಆಟಗಳು ಮೊದಲ ಬಾರಿ ಏಷ್ಯನ್ ಗೇಮ್ಸ್ ನಲ್ಲಿ ಸ್ಥಾನ ಪಡೆದಿವೆ. ಜಕಾರ್ತಾ ಹಾಗೂ ಪಾಲೆಂಬಂಗ್ ನಲ್ಲಿ ಏಷ್ಯನ್ ಗೇಮ್ಸ್ ನಡೆಯಲಿದೆ. ಇಂದಿನಿಂದ ಸೆಪ್ಟೆಂಬರ್ ವರೆಗೆ ಗೇಮ್ಸ್ ನಡೆಯಲಿದೆ.

ಭಾರತೀಯ ಸಮಯಾನುಸಾರ ಸಂಜೆ 5.30ಕ್ಕೆ ಉದ್ಘಾಟನಾ ಕಾರ್ಯಕ್ರಮ ಶುರುವಾಗಲಿದೆ. ರಾತ್ರಿ 9 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದೆ. ಆಗಸ್ಟ್ 18 ರಿಂದ ಸೆಪ್ಟೆಂಬರ್ 2 ರವರೆಗೆ ನಡೆಯಲಿರುವ ಏಷ್ಯನ್ ಗೇಮ್ಸ್ ನಲ್ಲಿ 28 ಒಲಂಪಿಕ್ಸ್ ಗೇಮ್ಸ್, ನಾಲ್ಕು ಹೊಸ ಒಲಂಪಿಕ್ಸ್ ಗೇಮ್ಸ್, 8 ಒಲಂಪಿಕ್ಸೇತರ ಪಂದ್ಯಗಳು ನಡೆಯಲಿವೆ. ಈ ಬಾರಿ ಭಾರತ 34 ಆಟಗಳಲ್ಲಿ ಸ್ಪರ್ಧೆ ನಡೆಸಲಿದೆ.

ಕಾಂಟ್ರಾಕ್ಟ್ ಬ್ರಿಡ್ಜ್ : ಇಸ್ಪಿಟ್ ಆಟದ ಬಗ್ಗೆ ಪ್ರತಿಯೊಬ್ಬ ಭಾರತೀಯನಿಗೂ ಗೊತ್ತು. ಈ ಆಟ ಇದೇ ಮೊದಲ ಬಾರಿ ಏಷ್ಯನ್ ಗೇಮ್ಸ್ ನಲ್ಲಿ ಸ್ಥಾನ ಪಡೆದಿದೆ. ಎರಡು ಆಟಗಾರರ ಜೋಡಿ ಗೆಲುವಿಗಾಗಿ ಸ್ಪರ್ಧೆ ನಡೆಸಲಿದೆ. 14 ದೇಶಗಳ 217 ಆಟಗಾರರು ಇದ್ರಲ್ಲಿ ಪಾಲ್ಗೊಳ್ಳಲಿದ್ದಾರೆ.

3×3 ಬಾಸ್ಕೆಟ್ ಬಾಲ್ : ಈ ಆಟ ನಾಲ್ಕು ಆಟಗಾರರನ್ನು ಒಳಗೊಂಡಿದೆ. ಮೂರು ಆಟಗಾರರು ಮೈದಾನದಲ್ಲಿದ್ರೆ ಒಬ್ಬ ಹೊರಗಿರುತ್ತಾನೆ.

ಇದಲ್ಲದೆ ಜೆಟ್ ಸ್ಕೀ, ಪ್ಯಾರಾಗ್ಲೈಡಿಂಗ್, ಪೆಂಕಾಕ್ ಸಿಲೆಟ್, ಜು-ಜಿಟ್ಸು, ಸಾಂಬೊ, ಕುರಾಶ್, ಕ್ಲೈಂಬಿಂಗ್, ರೋಲರ್ ಕ್ರೀಡೆಗಳು ನಡೆಯಲಿವೆ. ಭಾರತೀಯ ಆಟಗಾರರ ಮೇಲೆ ನಿರೀಕ್ಷೆ ಹೆಚ್ಚಿದ್ದು, ಹೆಚ್ಚಿನ ಪದಕ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.

ಶಮಿಗೆ ಬಿಗ್ ರಿಲೀಫ್ ನೀಡಿದ ಕೋರ್ಟ್

$
0
0

ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿಗೆ ನ್ಯಾಯಾಲಯ ಬಿಗ್ ರಿಲೀಫ್ ನೀಡಿದೆ. ಶಮಿ ವಿರುದ್ಧ ಪತ್ನಿ ಹಸೀನ್ ನೀಡಿದ್ದ ಅರ್ಜಿಯನ್ನು ಅಲಿಪುರ ಕೋರ್ಟ್ ವಜಾಗೊಳಿಸಿದೆ. ಹಸೀನ್, ಜೀವನ ನಿರ್ವಹಣೆಗಾಗಿ ಪ್ರತಿ ತಿಂಗಳು 7 ಲಕ್ಷ ರೂಪಾಯಿ ನೀಡುವಂತೆ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದ್ರೆ  ಮಗಳಿಗಾಗಿ ಜೀವನ ಭತ್ಯೆ ನೀಡಲು ಸಿದ್ಧ ಎಂದಿರುವ ಶಮಿ ಪ್ರತಿ ತಿಂಗಳು 80 ಸಾವಿರ ರೂಪಾಯಿ ನೀಡಲು ಒಪ್ಪಿಕೊಂಡಿದ್ದಾರೆ.

ಕೋರ್ಟ್ ನಲ್ಲಿ ವಾದ ಮಂಡಿಸಿದ ಶಮಿ ಪರ ವಕೀಲರು, ಶಮಿ ಮಗಳ ಜೀವನಕ್ಕೆ ಬೇಕಾಗುಷ್ಟು ಹಣ ನೀಡುತ್ತಾರೆ. ಹಸೀನ್ ಮಾಡಲಿಂಗ್ ಮತ್ತೆ ಶುರು ಮಾಡಿದ್ದು, ಹಾಗಾಗಿ ಅವ್ರಿಗೆ ಜೀವನ ಭತ್ಯೆ ನೀಡುವುದಿಲ್ಲ ಎಂದಿದ್ದಾರೆ. ಆದ್ರೆ ಹಸೀನ್ ಪರ ವಕೀಲರು ಇದನ್ನು ತಳ್ಳಿ ಹಾಕಿದ್ದಾರೆ. ವೃತ್ತಿಗೆ ವಾಪಸ್ ಆಗಿದ್ದು ನಿಜ. ಆದ್ರೆ ಇನ್ನೂ ಯಶಸ್ಸು ಸಿಕ್ಕಿಲ್ಲ. ಹಾಗಾಗಿ ಅಲಿಪುರ್ ಕೋರ್ಟ್ ತೀರ್ಪು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗುವುದಾಗಿ ಹೇಳಿದ್ದಾರೆ.

ಸದ್ಯ ಶಮಿ ಇಂಗ್ಲೆಂಡ್ ಪ್ರವಾಸದಲ್ಲಿದ್ದು, ಎರಡೂ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಹಸೀನ್ ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಶಮಿಯಿಂದ ದೂರವಾಗಿದ್ದು, ಫೇಸ್ಬುಕ್ ನಲ್ಲಿ ಶಮಿ ವಿರುದ್ಧ ಮೊದಲು ಆರೋಪ ಮಾಡಿದ್ದರು. ನಂತ್ರ ಪೊಲೀಸ್ ಮೊರೆ ಹೋಗಿದ್ದರು.

ಶಾಕಿಂಗ್: ದಿನಕ್ಕೆ 40 ಸಿಗರೇಟ್ ಸೇದುತ್ತಾನೆ 2 ವರ್ಷದ ಬಾಲಕ…!

$
0
0

ಕೇವಲ 2 ವರ್ಷದ ಬಾಲಕ ಧೂಮಪಾನ ಮಾಡ್ತಾನೆಂದ್ರೆ ಆಶ್ಚರ್ಯವಾಗುತ್ತೆ. ಅದ್ರಲ್ಲೂ ಒಂದಲ್ಲ ಎರಡಲ್ಲ ದಿನಕ್ಕೆ 40 ಕ್ಕೂ ಹೆಚ್ಚು ಸಿಗರೇಟ್ ಸೇದುತ್ತಾನೆಂದ್ರೆ ದಂಗಾಗೋದು ಗ್ಯಾರಂಟಿ. ನಾವು ತಮಾಷೆ ಮಾಡ್ತಿಲ್ಲ. 2 ವರ್ಷದ ಬಾಲಕ ಸಿಗರೇಟಿನ ಜೊತೆ ಕೆಫಿನ್ ಚಟವನ್ನೂ ಹೊಂದಿದ್ದಾನೆ. ದಿನಕ್ಕೆ ಅನೇಕ ಬಾರಿ ಕಾಫಿ ಕುಡಿಯುತ್ತಾನೆ ಬಾಲಕ.

ಇಂಡೋನೇಷ್ಯಾದ ಈ ಬಾಲಕನ ಹೆಸರು ರಾಪ್. ಕಳೆದ ಕೆಲ ತಿಂಗಳಿಂದ ಧೂಮಪಾನ ಚಟಕ್ಕೆ ಬಿದ್ದಿದ್ದಾನೆ. ದಿನಕ್ಕೆ ಸಿಗರೇಟಿನ ಎರಡು ಪ್ಯಾಕೆಟ್ ಖಾಲಿ ಮಾಡುವ ರಾಪ್ ಚಟಕ್ಕೆ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಮಗನಿಗೆ ಸಿಗರೇಟು ನೀಡದೆ ಹೋದ್ರೆ ವಿಚಿತ್ರವಾಗಿ ಆಡ್ತಾನಂತೆ. ಅಳುವುದಲ್ಲದೆ ಸರಿಯಾಗಿ ನಿದ್ರೆ ಮಾಡುವುದಿಲ್ಲವಂತೆ. ಪಕ್ಕದ ಮನೆಯವರಿಗೆ ತೊಂದರೆ ನೀಡುವ ಬಾಲಕ ಕಾಫಿ ಶಾಪ್ ಗೆ ಹೋಗಿ ಕಾಫಿ ಜೊತೆ ಸಿಗರೇಟು ಸೇದುತ್ತಾನಂತೆ.

ಆದಷ್ಟು ಬೇಗ ಮಗನ ಧೂಪಮಾನ ಚಟಕ್ಕೆ ಮುಕ್ತಿ ಕೊಡಿಸಲು ಮುಂದಾಗಿರುವ ಪಾಲಕರು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲು ನಿರ್ಧರಿಸಿದ್ದಾರೆ. ತಂದೆ ಆಗಾಗ ಧೂಮಪಾನ ಮಾಡ್ತಿದ್ದರಂತೆ. ಈಗ ಮಗ ಅಭ್ಯಾಸ ಮಾಡಿಕೊಂಡಿದ್ದಾನೆ. ಇಂಡೋನೇಷ್ಯಾದಲ್ಲಿ ದಿನ ದಿನಕ್ಕೂ ಧೂಮಪಾನಿಗಳ ಸಂಖ್ಯೆ ಹೆಚ್ಚಾಗ್ತಿದೆ.

ಎಸ್.ಬಿ.ಐ. ಗ್ರಾಹಕರು ತಿಳಿದಿರಲೇಬೇಕಾದ ಸುದ್ದಿ ಇದು

$
0
0

ದೇಶದ ಅತಿ ದೊಡ್ಡ ಬ್ಯಾಂಕ್ ಎಸ್.ಬಿ.ಐ. ದೇಶದಾದ್ಯಂತ 40 ಕೋಟಿಗೂ ಹೆಚ್ಚು ಗ್ರಾಹಕರನ್ನು ಹೊಂದಿದೆ. ಈ ಬ್ಯಾಂಕ್ ನಲ್ಲಿ ಖಾತೆಯಿದ್ರೆ ನಿಮ್ಮ ಕೈಗೂ ಎಟಿಎಂ ಕಾರ್ಡ್ ಬಂದಿರುತ್ತದೆ. ಈ ಎಟಿಎಂ ಕಾರ್ಡ್ ಗೆ ಬ್ಯಾಂಕ್ ಅನೇಕ ರೀತಿಯಲ್ಲಿ ಶುಲ್ಕ ವಸೂಲಿ ಮಾಡುತ್ತದೆ. ಎಟಿಎಂ ಕಾರ್ಡ್ ದಾರರು ಈ ಶುಲ್ಕದ ಬಗ್ಗೆ ಮಾಹಿತಿ ಹೊಂದಿರುವುದು ಅಗತ್ಯ. ಇಲ್ಲವಾದ್ರೆ ನಷ್ಟ ಎದುರಿಸೋದು ನಿಶ್ಚಿತ.

ಎಸ್.ಬಿ.ಐ. ಡೆಬಿಟ್ ಕಾರ್ಡ್ ತಯಾರಿಸಲು 100 ರಿಂದ 300 ರೂಪಾಯಿಯವರೆಗೆ ವಸೂಲಿ ಮಾಡುತ್ತದೆ. ಇದ್ರಲ್ಲಿ ಜಿ.ಎಸ್.ಟಿ. ಸೇರಿರುತ್ತದೆ. ಸಾಮಾನ್ಯ ಎಟಿಎಂ ಕಾರ್ಡ್ ತಯಾರಿಸಲು ಯಾವುದೇ ಶುಲ್ಕ ವಸೂಲಿ ಮಾಡುವುದಿಲ್ಲ. ಗೋಲ್ಡ್ ಡೆಬಿಟ್ ಕಾರ್ಡ್ ಗೆ 100 ರೂಪಾಯಿ ಹಾಗೂ ಪ್ಲಾಟಿನಂ ಕಾರ್ಡ್ ಗೆ 306 ರೂಪಾಯಿ ಶುಲ್ಕ ನೀಡಬೇಕು. ನಂತರದ ವರ್ಷಗಳಲ್ಲಿ ಮೆಂಟೆನೆನ್ಸ್ ಹೆಸರಿನಲ್ಲಿ ಎಸ್.ಬಿ.ಐ. ಗೋಲ್ಡ್ ಕಾರ್ಡಿಗೆ 100 ರೂಪಾಯಿ ಶುಲ್ಕ ವಸೂಲಿ ಮಾಡುತ್ತದೆ. ಪ್ಲಾಟಿನಂ ಕಾರ್ಡಿಗೆ 200 ರೂಪಾಯಿ ಶುಲ್ಕ ಪಾವತಿಸಬೇಕು.

ಡೆಬಿಟ್ ಕಾರ್ಡ್ ಬದಲಾವಣೆ ಮಾಡಬಯಸಿದ್ದರೆ 206 ರೂಪಾಯಿ ಶುಲ್ಕ ನೀಡಬೇಕಾಗುತ್ತದೆ. ಎಟಿಎಂ ಪಿನ್ ನಂಬರ್ ಮರೆತು ಹೋಗಿದ್ದು ಹೊಸ ನಂಬರ್ ಬಯಸುವವರು 51 ರೂಪಾಯಿ ನೀಡಬೇಕಾಗುತ್ತದೆ. ಎಸ್.ಬಿ.ಐ. ಎಟಿಎಂನಲ್ಲಿ ಹಣ ಡ್ರಾ ಮಾಡಿದ್ರೆ ಯಾವುದೇ ಶುಲ್ಕ ನೀಡಬೇಕಾಗಿಲ್ಲ. ಬೇರೆ ಬ್ಯಾಂಕ್ ಎಟಿಎಂನಲ್ಲಿ 5 ವ್ಯವಹಾರವನ್ನು ಉಚಿತವಾಗಿ ಮಾಡಬಹುದು. ನಂತ್ರದ ಹಣ ಡ್ರಾಗೆ 17 ರೂಪಾಯಿ ಶುಲ್ಕ ನೀಡಬೇಕಾಗುತ್ತದೆ. ಬ್ಯಾಲೆನ್ಸ್ ನೋಡಲು 6 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ.

ಪ್ರತಿಷ್ಠಿತ ಆಸ್ಪತ್ರೆ ಸಿಬ್ಬಂದಿ ವಿರುದ್ಧ ವಜ್ರಾಭರಣ ಕಳ್ಳತನದ ಆರೋಪ

$
0
0

ಬೆಂಗಳೂರು: ಎಕ್ಸ್ ರೇಗೆಂದು ಹೋಗಿದ್ದಾಗ ಆಸ್ಪತ್ರೆ ಸಿಬ್ಬಂದಿಗಳು ತನ್ನ ವಜ್ರದ ಆಭರಣಗಳನ್ನು ಕಳ್ಳತನ ಮಾಡಿದ್ದಾರೆ ಎಂದು ಮಣಿಪಾಲ್ ಆಸ್ಪತ್ರೆ ಸಿಬ್ಬಂದಿಗಳ ವಿರುದ್ಧ ಮಹಿಳೆಯೊಬ್ಬರು ದೂರು ನೀಡಿದ್ದಾರೆ.

ವೈಟ್ ಫೀಲ್ಡ್ ನ ಅಪ್‌ಸ್ಕೇಲ್‌ ಅಪಾರ್ಟ್‌ಮೆಂಟ್ ನಿವಾಸಿ ದೀಪ್ತಿ ದಾಸ್‌ ಒಡವೆ ಕಳೆದುಕೊಂಡ ಮಹಿಳೆ. ಬೆನ್ನು ನೋವಿನ ಚಿಕಿತ್ಸೆಗಾಗಿ ಆ.4 ರಂದು ಮಣಿಪಾಲ್‌ ಆಸ್ಪತ್ರೆಗೆ ತೆರಳಿದ್ದ ವೇಳೆ ವೈದ್ಯರ ಸಲಹೆ ಮೇರೆಗೆ ಎಕ್ಸ್‌ರೇ ತೆಗೆಸಲು ಹೋಗಿದ್ದು, ಸಿಬ್ಬಂದಿಗಳು ಆಭರಣಗಳನ್ನು ತೆಗೆದಿಡಲು ಸೂಚಿಸಿದ್ದಾರೆ.

ಆಭರಣಗಳನ್ನು ಬ್ಯಾಗಲ್ಲಿಟ್ಟು ಎಕ್ಸ್ ರೇ ಯಂತ್ರದ ಪಕ್ಕದಲ್ಲಿಯೇ ಇಟ್ಟಿದ್ದು, ಆದರೆ ಮನೆಗೆ ಬಂದು ನೋಡಿದಾಗ ಆಭರಣಗಳು ಇರಲಿಲ್ಲ. ಹೀಗಾಗಿ ಸಿಬ್ಬಂದಿಗಳೇ ಕಳ್ಳತನ ಮಾಡಿದ್ದಾರೆ ಎಂದು ಮಹಿಳೆ ಮಹದೇವಪುರ ಠಾಣೆಗೆ ದೂರು ನೀಡಿದ್ದಾರೆ.

ಮಹಮದ್‌ ಶಹೀದ್‌ ಮತ್ತು ಸುನಿಲ್‌ಕುಮಾರ್‌ ಎಂಬಿಬ್ಬರು ಅಂದು ಎಕ್ಸರೇ ರೂಂನಲ್ಲಿದ್ದು, ಎಕ್ಸ್‌ರೇ ಬಳಿಕ ಬಟ್ಟೆ ಬದಲಾಯಿಸಲು ಹೋದಾಗ ಆಭರಣ ಕದಿಯಲಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ. ದೂರಿನ ಹಿನ್ನಲೆಯಲ್ಲಿ ಆಸ್ಪತ್ರೆಯ ಸಿಸಿ ಟಿವಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮಕ್ಕಳಿಲ್ಲದ ದಂಪತಿ ನೀಡಬೇಕು ದೊಡ್ಡ ಮೊತ್ತದ ತೆರಿಗೆ..!

$
0
0

ಜನಸಂಖ್ಯಾ ಸ್ಫೋಟಕ್ಕೆ ಕಂಗಾಲಾಗಿದ್ದ ಚೀನಾ 1970 ರಲ್ಲಿ ಒಂದೇ ಮಗು ನೀತಿಯನ್ನು ಜಾರಿಗೆ ತಂದಿತ್ತು. ಈಗ ತನ್ನ ನೀತಿಯಲ್ಲಿ ಮತ್ತೆ ಬದಲಾವಣೆ ಮಾಡಿದೆ. ಮಕ್ಕಳ ಸಂಖ್ಯೆ ಹೆಚ್ಚಳಕ್ಕೆ ಎರಡು ಸಂಸ್ಥೆಗಳು ವಿವಾದಾತ್ಮಕ ಯೋಜನೆ ಜಾರಿಗೆ ತಂದಿವೆ.

ಚೀನಾದಲ್ಲಿ ಯುವಕರ ಸಂಖ್ಯೆ ಕ್ಷೀಣಿಸುತ್ತಿದೆ. ವೃದ್ಧರ ಸಂಖ್ಯೆ ಹೆಚ್ಚಾಗ್ತಿದೆ. ಈ ಸಮಸ್ಯೆ ದೂರ ಮಾಡಲು ಚೀನಾದಲ್ಲಿ ಹೊಸ ವೈವಾಹಿಕ ನೀತಿ ಜಾರಿಗೆ ಬಂದಿದೆ. ದಂಪತಿ ಎರಡು ಮಕ್ಕಳಿಗಿಂತ ಕಡಿಮೆ ಮಕ್ಕಳನ್ನು ಹೊಂದಿದ್ರೆ ಅಥವಾ ಮಕ್ಕಳೇ ಇಲ್ಲದ ದಂಪತಿ ಮಾತೃತ್ವ ನಿಧಿ ನೀಡಬೇಕಾಗುತ್ತದೆ. ಈ ನೀತಿ ಸಾಮಾಜಿಕ ಜಾಲತಾಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಚೀನಾದಲ್ಲಿ ಒಂದು ಮಗು ನೀತಿಯಿಂದಾಗಿ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಇದು ಚೀನಾ ಆರ್ಥಿಕ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ. ಹಾಗಾಗಿ ಎರಡು ಸಂಸ್ಥೆಗಳು ಹೊಸ ನೀತಿ ಜಾರಿಗೆ ತಂದಿವೆ. ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಕುಟುಂಬ ಠೇವಣಿ ಹಣವನ್ನು ವಾಪಸ್ ಪಡೆಯಲು ಅರ್ಜಿ ಸಲ್ಲಿಸಬಹುದು. ಎರಡು ಅಥವಾ ಅದಕ್ಕಿಂತ ಕಡಿಮೆ ಮಕ್ಕಳಿರುವ ದಂಪತಿ ನೀಡುವ ಮಾತೃತ್ವದ ನಿಧಿಯನ್ನು ನಿವೃತ್ತಿ ನಂತ್ರ ಪಡೆಯಬಹುದಾಗಿದೆ. ಎರಡು ಸಂಸ್ಥೆಗಳ ಭಿನ್ನ-ಭಿನ್ನ ಯೋಚನೆ ಜನರ ಮಧ್ಯೆ ಚರ್ಚೆಗೆ ಕಾರಣವಾಗಿದೆ.

 

ಗಣೇಶ ಮೂರ್ತಿ 5 ಅಡಿಗೆ ಸೀಮಿತಗೊಳಿಸಿರುವ ಆದೇಶಕ್ಕೆ ವ್ಯಾಪಕ ವಿರೋಧ

$
0
0

ಬೆಂಗಳೂರು: ಗೌರಿ-ಗಣೇಶ ಹಬ್ಬಕ್ಕೆ ದಿನಗಣನೆ ಶುವಾಗಿದೆ. ಗಣೇಶ ಮೂರ್ತಿಗಳ ತಯಾರಿಯೂ ಬಹುತೇಕ ಪೂರ್ಣಗೊಂಡಿದೆ. ಈ ಸಂದರ್ಭದಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಈ ಬಾರಿ ಗಣೇಶ ಮೂರ್ತಿಯನ್ನು 5 ಅಡಿಗೆ ಸೀಮಿತಗೊಳಿಸಬೇಕು ಎಂದು ಆದೇಶ ಹೊರಡಿಸಿದೆ.

ಗಣೇಶ ಮೂರ್ತಿಯನ್ನು 5 ಅಡಿಗೆ ನಿರ್ಬಂಧಿಸಬೇಕೆಂಬ ತನ್ನ ಹಿಂದಿನ ಯೋಚನೆಯನ್ನು ಇತ್ತೀಚೆಗಷ್ಟೇ ಮಂಡಳಿ ಕೈಬಿಟ್ಟಿತ್ತು. ಆದರೀಗ ಕೊನೆ ಗಳಿಗೆಯಲ್ಲಿ ತನ್ನ ನಿರ್ಧಾರ ಬದಲಿಸಿಕೊಂಡು ಮತ್ತೆ ಆದೇಶ ಹೊರಡಿಸಿದೆ.

ದೊಡ್ಡ ಗಾತ್ರದ ಮೂರ್ತಿಗಳ ವಿಸರ್ಜನೆಗೆ ಸಮಸ್ಯೆಯಾಗಲಿದೆ, ಮೂರ್ತಿ ವಿಸರ್ಜನೆ ಮಾಡಿದ ಬಳಿಕ ಹೆಚ್ಚು ತ್ಯಾಜ್ಯ ಉತ್ಪತ್ತಿಯಾಗಿ, ವಿಲೇವಾರಿಗೆ ತೊಂದರೆಯಾಗುತ್ತಿದೆ ಹಾಗೂ ಜಲಮೂಲಗಳಿಗೆ ತೊಂದರೆಯಾಗುತ್ತಿದ್ದು, ಕೆರೆಗಳ ಸಂರಕ್ಷಣೆಗೆ ಅಡ್ಡಿಯಾಗುತ್ತವೆ ಎಂಬ ಕಾರಣಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ಮೂರ್ತಿಯನ್ನು 5 ಅಡಿಗೆ ಸೀಮಿತಗೊಳಿಸಿದೆ. ಈ ಕುರಿತು ಮಂಡಳಿ ಎಲ್ಲ ಜಿಲ್ಲಾಧಿಕಾರಿಗಳಿಗೂ ಪರಿಶೀಲನೆ ನಡೆಸಬೇಕೆಂದು ಸೂಚಿಸಿದೆ.

ಮಾಲಿನ್ಯ ನಿಯಂತ್ರಣ ಮಂಡಳಿಯ ಈ ಏಕಾಏಕಿ ನಿರ್ಧಾರಕ್ಕೆ ಬಹುತೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೂರ್ತಿ ತಯಾರಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.


ಮೂವರು ಹೆಂಡಿರ ಮುದ್ದಿನ ಗಂಡ: ಶೋಕಿ ಜೀವನಕ್ಕೆ ದರೋಡೆ ಕೃತ್ಯಕ್ಕೆ ಇಳಿದ

$
0
0

ಕಲಬುರಗಿ: ಮೂವರು ಹೆಂಡಿರ ಮುದ್ದಿನ ಗಂಡನಾಗಿದ್ದ ವ್ಯಕ್ತಿಯೊಬ್ಬ ತನ್ನ ಶೋಕಿ ಜೀವನಕ್ಕಾಗಿ ಆಯ್ಕೆ ಮಾಡಿಕೊಂಡಿದ್ದು ಏನು ಗೊತ್ತಾ…? ದರೋಡೆ ಕೆಲಸ….ದರೋಡೆಕೋರರ ಗುಂಪು ಕಟ್ಟಿ ಅದರ ಮುಖ್ಯಸ್ಥನಾಗಿ ಮೆರೆಯುತ್ತಿದ್ದ ಶೋಕಿಲಾಲ ಅಂತರಾಜ್ಯ ಕಳ್ಳ ಈಗ ತನ್ನ ಗ್ಯಾಂಗ್ ನೊಂದಿಗೆ ಕಲಬುರ್ಗಿ ಠಾಣೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.

ಮಹಾರಾಷ್ಟ್ರದ ಮೂವರು ಮತ್ತು ಕರ್ನಾಟಕದ ಓರ್ವ ಬಂದಿತ ಆರೋಪಿಗಳು. ದರೋಡೆಕೋರರ ತಂಡದ ಮುಖ್ಯಸ್ಥನೇ ಮೂವರು ಹೆಂಡಿರ ಮುದ್ದಿನ ಗಂಡ ಸೋಲಾಪುರದ ಹುಸೇನ್ ಶಿವಾಜಿ ಗಾಯಕವಾಡ ಯಾನೆ ಸಾಗರ್ ದಾದಾ. ದಾದಾನ ಜತೆ ಶೀತಲ್, ಶಂಕರ್ ಮತ್ತು ಕಮಲಾಪುರದ ನಾಗರಾಜ್ ಅವರನ್ನೂ ಬಂಧಿಸಲಾಗಿದೆ. ಬಂಧಿತರಿಂದ ಒಂದು ಪಿಸ್ತೂಲ್, ಒಂಬತ್ತು ಜೀವಂತ ಗುಂಡು, 550 ಗ್ರಾಂ ಚಿನ್ನಾಭರಣ, ಒಂದು ಕೆ.ಜಿ. ಬೆಳ್ಳಿ ಆಭರಣ, ಒಂದು ಕಾರು ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಹುಸೇನ್ ಶಿವಾಜಿ ಗಾಯಕವಾಡ್ ತನ್ನ ಮೂವರು ಹೆಂಡತಿಯರನ್ನು ಸುಖವಾಗಿಡಲು, ಐಷಾರಾಮಿ ಜೀವನಕ್ಕಾಗಿ ಕಳ್ಳತನ ಕೃತ್ಯಕ್ಕಿಳಿದಿದ್ದ. ಹೆಂಡತಿಯರಿಗಾಗಿ ದೊಡ್ಡ ದೊಡ್ಡ ಬಂಗಲೆ ನಿರ್ಮಿಸಿದ್ದನಲ್ಲದೆ, ದರೋಡೆಯಿಂದ ಬಂದ ಹಣದಿಂದ ಮೋಜು-ಮಸ್ತಿ ಮಾಡುತ್ತಿದ್ದ. ಈತನ ವಿರುದ್ಧ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಲ್ಲಿ 8 ರಿಂದ 10 ಪ್ರಕರಣಗಳು ದಾಖಲಾಗಿದ್ದವು ಎಂದು ಕಲಬುರ್ಗಿ ಎಸ್.ಪಿ. ಶಶಿಕುಮಾರ್ ತಿಳಿಸಿದ್ದಾರೆ.

ಮಹಾರಾಷ್ಟ್ರದಿಂದ ಕಾರಿನಲ್ಲಿ ಬರುತ್ತಿದ್ದ ದರೋಡೆಕೋರರು, ಕಳ್ಳತನ ಮಾಡಿಕೊಂಡು ಕದ್ದ ವಸ್ತುಗಳೊಂದಿಗೆ ಮತ್ತೆ ಮಹಾರಾಷ್ಟ್ರಕ್ಕೆ ವಾಪಸ್ಸಾಗುತ್ತಿದ್ದರು. ಟೋಲ್ ವಾಹನ ಸಂಚಾರದ ಮಾಹಿತಿ ಪಡೆದ ಪೊಲೀಸರಿಗೆ ದರೋಡೆಕೋರರ ಸುಳಿವು ಸಿಕ್ಕಿದೆ. ಈ ಹಿನ್ನಲೆಯಲ್ಲಿ ಪೊಲೀಸರು ಆರೋಪಿಗಳನ್ನು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನೌಕಾಪಡೆ ಜಾಗದಲ್ಲಿ ಗಾಂಜಾ ಬೆಳೆದಿದ್ದ ಭೂಪ…!

$
0
0

ಪಣಜಿ: ಯಾರೇ ಆಗಲಿ ತಮ್ಮ ಜಾಗದಲ್ಲಿ ಗಾಂಜಾ ಬೆಳೆಯುವುದು ಅಪರಾಧ. ಹಾಗೆಂದು ಬೇರೆಯವರ ಜಾಗದಲ್ಲಿ ಬೆಳೆದರೆ? ಅದರಲ್ಲೂ ಸರ್ಕಾರಿ ಜಾಗದಲ್ಲಿ ಬೆಳೆದರೆ ಹೇಗೆ?

ಇಂಥದ್ದೊಂದು ಕ್ರಿಮಿನಲ್ ಐಡಿಯಾ ಮಾಡಿದ್ದ ವ್ಯಕ್ತಿ ಗೋವಾದಲ್ಲಿ ಸಿಕ್ಕಿಬಿದ್ದಿದ್ದಾನೆ. ಪಣಜಿಯಿಂದ 30 ಕಿಲೋಮೀಟರ್ ದೂರದಲ್ಲಿರುವ ನೌಕಾಪಡೆ ಜಾಗದಲ್ಲಿ ಸಮೀರ್ ಶೇಖ್ ಎಂಬಾತ ಹುಲುಸಾಗಿ ಗಾಂಜಾ ಬೆಳೆ ತೆಗೆದಿದ್ದ.

ನೌಕಾಪಡೆ ವಸತಿ ಗೃಹ ನಿರ್ಮಿಸುತ್ತಿದ್ದ ಜಾಗದ ಸಮೀಪ ಈತ ಬೆಳೆ ತೆಗೆದಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಸಂಕಷ್ಟಕ್ಕೆ ಸಿಲುಕಿರುವ ಕುಟುಂಬವನ್ನು ರಕ್ಷಿಸುವಂತೆ ಸಿಎಂಗೆ ಮನವಿ ಮಾಡಿದ ನಟಿ

$
0
0

ಕೊಡಗು ಜಿಲ್ಲೆಯಲ್ಲಿ ವರುಣನ ರುದ್ರ ನರ್ತನ ಮುಂದುವರೆದಿದೆ. ಭಾರೀ ಮಳೆಯ ಕಾರಣ ಗುಡ್ಡಗಳು ಕುಸಿಯುತ್ತಿದ್ದು, ಇದರಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇದು ರಕ್ಷಣಾ ಕಾರ್ಯಾಚರಣೆ ಮೇಲೂ ತೀವ್ರ ಪರಿಣಾಮ ಬೀರಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಖುದ್ದು ಅಲ್ಲಿನ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕ್ಷಣ ಕ್ಷಣದ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಕೊಡಗಿನಲ್ಲಿ ಎಲ್ಲಿ ನೋಡಿದರಲ್ಲಿ ನೀರು ತುಂಬಿಕೊಂಡಿದ್ದು, ಬಹಳಷ್ಟು ಮಂದಿ ಅಪಾಯಕ್ಕೆ ಸಿಲುಕಿದ್ದಾರೆ.

ಈ ಮಧ್ಯೆ ನಟಿ ದಿಶಾ ಇಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ, ಮಂದಲಪಟ್ಟಿಯಲ್ಲಿ ತಮ್ಮ ಕುಟುಂಬ ಸೇರಿದಂತೆ 40 ಮಂದಿ ಸಂಕಷ್ಟಕ್ಕೆ ಸಿಲುಕಿದ್ದು, ಅವರ ನೆರವಿಗೆ ರಕ್ಷಣಾ ಪಡೆ ಕಳುಹಿಸುವಂತೆ ಮನವಿ ಮಾಡಿದ್ದಾರೆ. ಈ 40 ಮಂದಿಯ ಪೈಕಿ ತುಂಬು ಗರ್ಭಿಣಿಯೊಬ್ಬರೂ ಇದ್ದು, ಅವರುಗಳನ್ನು ಸುರಕ್ಷಿತ ಸ್ಥಳಕ್ಕೆ ಕರೆ ತರಲು ಕೋರಿದ್ದಾರೆ.

ಹುಲಿ ಇರಬೇಕಾದ ಜಾಗದಲ್ಲಿತ್ತು ನಾಯಿ…!

$
0
0

ಚೀನಾದ ಪ್ರಾಣಿ ಸಂಗ್ರಹಾಲಯದಲ್ಲಿ ಪ್ರಾಣಿಗಳು ಅದಲು ಬದಲಾದ ಸುದ್ದಿ ವೈರಲ್ ಆಗ್ತಾ ಇದೆ.   ಹೆಬಿಯ ಯುಹೂ ಪ್ರಾಣಿ ಸಂಗ್ರಹಾಲಯದಲ್ಲಿ ಹುಲಿ ಇರುವ ಸ್ಥಳದಲ್ಲಿ ನಾಯಿ ಕಾಣಿಸಿಕೊಂಡಿದ್ದು, ಸದ್ಯ ಈ ಬಗ್ಗೆ ತನಿಖೆ ನಡೆಯುತ್ತಿದೆ.

ಪ್ರಾಣಿ ಸಂಗ್ರಹಾಲಯಕ್ಕೆ ಆಗಸ್ಟ್ 14 ರಂದು ಭೇಟಿ ಮಾಡಿದ ಪ್ರವಾಸಿ, ಈ ದೃಶ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ತಾಣಗಳಲ್ಲಿ ಅಪ್ ಲೋಡ್ ಮಾಡಿದ್ದಾರೆ. ಈ ದೃಶ್ಯ ಸಖತ್ ವೈರಲ್ ಆಗ್ತಾ ಇದೆ. ಬರೀ ಒಂದೇ ಪ್ರಾಣಿಯ ಸ್ಥಾನ ಪಲ್ಲಟವಾಗಿಲ್ಲ. ಬದಲಿಗೆ ಹಲವು ಪ್ರಾಣಿಗಳು ತಮಗೆ ನಿಗದಿ ಮಾಡಿದ ಸ್ಥಳದಿಂದ ಬೇರೆ ಕಡೆ ಕಂಡು ಬಂದಿವೆ.

ಮೊಸಳೆಗೆ ಮೀಸಲಿಟ್ಟ ಸ್ಥಳದಲ್ಲಿ ಬಾತುಕೋಳಿ ಕಂಡು ಬಂದಿದೆ. ಗೂಬೆಗಳು ಹಾಗೂ ಚಿನ್ನದ ಬಣ್ಣದ ಹದ್ದುಗಳು ಇರಬೇಕಾದಲ್ಲಿ ನಾಯಿಗಳು ಪ್ರತ್ಯಕ್ಷವಾಗಿವೆ. ಇನ್ನು ಉದ್ದದ ಕಿವಿಯನ್ನು ಹೊಂದಿರುವ ಮೊಲಗಳ ಆವರಣದಲ್ಲಿ ಸಾಮಾನ್ಯ ಮೊಲಗಳು ಕಾಣಿಸಿಕೊಂಡಿವೆ. ಈ ದೃಶ್ಯಗಳನ್ನು ಸಾಮಾಜಿಕ ತಾಣಗಳಲ್ಲಿ ಅಪ್ ಲೋಡ್ ಮಾಡ್ತಾ ಇದ್ದಂತೆ, ಸಾರ್ವಜನಿಕರು ಹಿಡಿ ಶಾಪ ಹಾಕಿದ್ದಾರೆ.

ಈ ಬಗ್ಗೆ ಪ್ರಾಣಿ ಸಂಗ್ರಹಾಲಯದವರು ಮೌನ ಮುರಿದಿದ್ದಾರೆ. ಕೆಲವು ತಿಂಗಳುಗಳ ಹಿಂದೆ ನಮ್ಮ ಸಂಗ್ರಹಾಲಯದ ಪ್ರಾಣಿಗಳು, ಬೇರೆ ಕಡೆಗೆ ಸ್ಥಳಾಂತರವಾಗಿವೆ. ಇನ್ನು ಪ್ರಾಣಿಗಳನ್ನು ಸರಿಯಾಗಿ ಹೊಂದಿಸುವ ಕಾರ್ಯ ಬಾಕಿ ಇದೆ. ಹೀಗಾಗಿಯೇ ಪ್ರವಾಸಿಗರಿಂದ ಪಡೆಯುತ್ತಿರುವ ಹಣವನ್ನು ಸಹ ಕಡಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರವಾಹದ ಸಂಕಷ್ಟಕ್ಕೆ ಸಿಲುಕಿದ ಜನರು ಹೆಲಿಕಾಪ್ಟರ್ ಗಮನ ಸೆಳೆಯಲು ಈ ಕ್ರಮ ಅನುಸರಿಸಿ

$
0
0

ಬೆಂಗಳೂರು: ವರುಣನ ರೌದ್ರಾವತಾರಕ್ಕೆ ಜಲ ಪ್ರಳಯಕ್ಕೀಡಾಗಿರುವ ಕೊಡಗು ಜಿಲ್ಲೆಯಲ್ಲಿ ಹೆಲಿಕಾಪ್ಟರ್ ಮೂಲಕ ಸಂತ್ರಸ್ತರ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಹೆಲಿಕಾಪ್ಟರ್ ಮತ್ತು ಏರ್ ಲಿಫ್ಟರ್ ಗಳ ಗಮನ ಸೆಳೆಯಲು ಜನರು ಈ ಕೆಳಗಿನ ಕ್ರಮಗಳನ್ನು ಅನುಸರಿಸಬೇಕೆಂದು ಭಾರತೀಯ ಸೇನೆ ತಿಳಿಸಿದೆ.

* ಹೆಲಿಕ್ಯಾಪ್ಟರ್ ಹಾರಾಟವನ್ನು ಗಮನಿಸಿ.
* ಎತ್ತರವಾದ ಪ್ರದೇಶಕ್ಕೆ ಬಂದು ನಿಂತುಕೊಳ್ಳಿ.
* ಬೆಂಕಿ ಅಥವಾ ಹೊಗೆಯನ್ನು ಹಾಕಿ.
* ಬಣ್ಣದ ಬಟ್ಟೆಗಳನ್ನು ಹಾರಿಸಿ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೂ ಹೆಲಿಕ್ಯಾಪ್ಟರ್ ರಕ್ಷಣಾ ಕಾರ್ಯ ಕೈಗೊಳ್ಳಲಿದ್ದು, ಈ ವೇಳೆ ಕುಡಿಯುವ ನೀರು ಹಾಗೂ ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

ಭಾರೀ ಮಳೆಯಿಂದ ಸಂಕಷ್ಟಕ್ಕೀಡಾದ ಸಹಸ್ರಾರು ಜನ

$
0
0

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಗೆ 6 ಜನರು ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಹಲವೆಡೆ ಗುಡ್ಡ ಕುಸಿತ ಸಂಭವಿಸುತ್ತಿದ್ದು, ಸಾವಿರಾರು ಜನರು ಸಂಕಷ್ಟಕ್ಕೀಡಾಗಿದ್ದಾರೆ. ಹಲವೆಡೆ ಹೆಲಿಕಾಪ್ಟರ್ ಮೂಲಕ ಸಂತ್ರಸ್ತರ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ.

ಹೆಮ್ಮತ್ತಾಳು, ಮೇಘತ್ತಾಳು, ಮುಕ್ಕೋಡ್ಲು, ಕಾಲೂರು ಗ್ರಾಮದಲ್ಲಿ ಗುಡ್ಡ ಕುಸಿತದಿಂದಾಗಿ 500ಕ್ಕೂ ಹೆಚ್ಚು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಡಿಕೇರಿ-ಮಂಗಳೂರು ಹೆದ್ದಾರಿಯ ಜೋಡುಪಾಲ, ಮದೆನಾಡು ಬಳಿ ಭಾರಿ ಪ್ರಮಾಣದಲ್ಲಿ ಬೆಟ್ಟ ಕುಸಿದಿದ್ದು 200ಕ್ಕೂ ಹೆಚ್ಚು ಮಂದಿ ಸಿಲುಕಿಕೊಂಡಿದ್ದಾರೆ.

ಸೋಮವಾರಪೇಟೆ-ಮಡಿಕೇರಿ ನಡುವಿನ ರಸ್ತೆ ಮೂರು ಕಿಲೋ ಮೀಟರ್ ವರೆಗೂ ಕುಸಿತಗೊಂಡಿದೆ. ಇನ್ನು ಪ್ರವಾಹಕ್ಕೆ ಮಕ್ಕಂದೂರಿನಲ್ಲಿ ತೂಗುಸೇತುವೆಯೇ ಮುಳುಗಡೆಯಾಗಿದೆ. ಪೊಕಳತೊಡು ಎಂಬಲ್ಲಿ ರಸ್ತೆಗೆ ಕಟ್ಟಿದ ತಡೆಗೋಡೆ ಸಮೇತ ರಸ್ತೆ ಕುಸಿತವಾಗಿದೆ. ರಾಮ, ಲಕ್ಷ್ಮಣ ತೀರ್ಥ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದೆ.

ದೆಹಲಿ ವಿಮಾನ ನಿಲ್ದಾಣಕ್ಕೆ ನುಗ್ತಿದ್ದ ಯುವಕ ಅರೆಸ್ಟ್

$
0
0

ಸಿಐಎಸ್ಎಫ್ ಗುರುವಾರ ರಾತ್ರಿ ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯುವಕನೊಬ್ಬನನ್ನು ಬಂಧಿಸಿದೆ. ಈ ಯುವಕ ವಿಮಾನ ನಿಲ್ದಾಣಕ್ಕೆ ನುಗ್ಗಲು ಯತ್ನಿಸಿದ್ದ ಎನ್ನಲಾಗಿದೆ. ಯುವಕ ಮದ್ಯಪಾನ ಮಾಡಿದ್ದ. ಅಲ್ಲದೆ ಕ್ಯಾಬ್ ಹೈಜಾಕ್ ಮಾಡಿದ್ದ ಎನ್ನಲಾಗಿದೆ.

ಸಿಐಎಸ್ಎಫ್ ಸಿಬ್ಬಂದಿ ಯುವಕನನ್ನು ಬಂಧಿಸಿ ಪೊಲೀಸ್ ವಶಕ್ಕೆ ನೀಡಿದ್ದಾರೆ. ಸಿಐಎಸ್ಎಫ್ ಬ್ಯಾರಿಕೇಡ್ ನಿಂದ ಯುವಕ ಮುಂದೆ ಬರ್ತಿದ್ದನಂತೆ. ಈ ವೇಳೆ ಸಿಐಎಸ್ಎಫ್ ಯೋಧರು ಗಾಳಿಯಲ್ಲಿ ಎರಡು ಗುಂಡು ಹಾರಿಸಿದ್ದಾರೆ. ಆರೋಪಿ ದೆಹಲಿಯ ಸಂಗಮ ವಿಹಾರ್ ನಿವಾಸಿಯಾಗಿದ್ದು, ಆತನ ಹೆಸರು ಶಂಕರ್ ಎನ್ನಲಾಗಿದೆ.

ಆರೋಪಿ ಅನಿಲ್ ಹೆಸರಿನ ಕ್ಯಾಬ್ ಚಾಲಕನನ್ನು ಹೈಜಾಕ್ ಮಾಡಿದ್ದನಂತೆ. ಸಿಐಎಸ್ಎಫ್ ಚೆಕ್ಕಿಂಗ್ ಗೆ ಕಾರು ನಿಲ್ಲಿಸುತ್ತಿದ್ದಂತೆ ಕ್ಯಾಬ್ ಡ್ರೈವರ್ ಕಾರಿನಿಂದ ಇಳಿದಿದ್ದಾನೆ. ಆದ್ರೆ ಶಂಕರ್ ಕ್ಯಾಬ್ ವಶಕ್ಕೆ ಪಡೆದು ಕಾರ್ ಮುಂದೆ ಚಲಾಯಿಸಿದ್ದಾನೆ. ಸಿಐಎಸ್ಎಫ್ ಆತನನ್ನು ಬಂಧಿಸಿ ಪೊಲೀಸ್ ವಶಕ್ಕೆ ನೀಡಿದೆ.

 


ಇಲ್ಲಿದೆ ಬಾಲಿವುಡ್ ನಟಿಯರ ಶ್ರೀಮಂತ ಪತಿಯರ ಲಿಸ್ಟ್

$
0
0

ಬಾಲಿವುಡ್ ನ ನಟಿಯರು ಸಿನಿಮಾ ರಂಗದಲ್ಲಿ ಅಥವಾ ಸಿನಿಮಾದ ಹೊರತಾಗಿ ತಮ್ಮ ಜೋಡಿಗಳನ್ನು ಆರಿಸಿಕೊಂಡಿದ್ದಾರೆ. ಆ ಪೈಕಿ ಬಾಲಿವುಡ್ ನ ಕೆಲ ಶ್ರೀಮಂತ ಪತಿಯರ ಪಟ್ಟಿಯೊಂದು ಬಿಡುಗಡೆಯಾಗಿದೆ.

2018ರ ಮೇ ನಲ್ಲಿ ಬಾಲಿವುಡ್ ನಟಿ ಸೋನಮ್ ಕಪೂರ್, ಆನಂದ್ ಅಹುಜಾ ಅವರನ್ನು ಮದುವೆಯಾದರು. ಆನಂದ್ ಅಹುಜಾ ಅವರ ನಿಖರ ಆಸ್ತಿ ಮೌಲ್ಯವನ್ನು ಪಟ್ಟಿಯಲ್ಲಿ ತಿಳಿಸಲಾಗಿಲ್ಲ. ಆದ್ರೆ ಆನಂದ್ ಅಹುಜಾ ಸುಮಾರು 300 ಕೋಟಿ ರೂಪಾಯಿ ಆಸ್ತಿಯನ್ನ ಹೊಂದಿದ್ದಾರಂತೆ.

ಇನ್ನು ಬಾಲಿವುಡ್ ನ ಮತ್ತೊಂದು ಕ್ಯೂಟ್ ಕಪಲ್ ಅಂದ್ರೆ ಶಿಲ್ಪಾಶೆಟ್ಟಿ ಮತ್ತು ರಾಜ್ ಕುಂದ್ರಾ. ರಾಜ್ ಕುಂದ್ರಾ 2009ರಲ್ಲಿ ಮದುವೆಯಾಗಿದ್ದು ಸುಮಾರು 2700 ಕೋಟಿ ರೂಪಾಯಿಗೆ ಒಡೆಯರಂತೆ. ಡಿಸೆಂಬರ್ 2017ರಲ್ಲಿ ವಿವಾಹವಾಗಿದ್ದು ಅನುಷ್ಕಾ ಶರ್ಮ ಮತ್ತು ವಿರಾಟ್ ಕೊಹ್ಲಿ . ಟೀಮ್ ಇಂಡಿಯಾದ ಕ್ಯಾಪ್ಟನ್ ಸದ್ಯ 372 ಕೋಟಿ ರೂ. ಆಸ್ತಿಯ ಮಾಲೀಕರಂತೆ.

2012ರಲ್ಲಿ ವಿದ್ಯಾಬಾಲನ್ ರನ್ನು ಮದುವೆಯಾದ ಸಿದ್ದಾರ್ಥ್ ರಾಯ್ ಕಪೂರ್ 3300 ಕೋಟಿ ರೂಪಾಯಿ ಸಾಮ್ರಾಜ್ಯಕ್ಕೆ ಅಧಿಪತಿಯಂತೆ. 2016ರಲ್ಲಿ ಗೃಹಸ್ಥಾಶ್ರಮ ಪ್ರವೇಶಿಸಿದ ಆಸಿನ್ ಪತಿ ರಾಹುಲ್ ಶರ್ಮಾ 1400 ಕೋಟಿ ರುಪಾಯಿಗೆ ಯಜಮಾನರಂತೆ. 2014ರಲ್ಲಿ ಮದುವೆಯಾದ ದಿಯಾ ಮಿರ್ಜಾ ಪತಿ ಸಾಹಿಲ್ ಸಿಂಗ್ ಆಸ್ತಿ ಮೌಲ್ಯ 20 ಮಿಲಿಯನ್ ಡಾಲರ್ ಗಳು.

1995ರಲ್ಲಿ ಜೂಹಿ ಚಾವ್ಲಾ ಕೈ ಹಿಡಿದ ಜೈ ಮೆಹ್ತಾ 2400 ಕೋಟಿ ರೂಪಾಯಿಯ ಖಜಾನೆ ಹೊಂದಿದ್ದಾರಂತೆ. ಆಯೇಷಾ ಟಾಕಿಯಾಗೆ ಜೋಡಿಯಾದ ಫರ್ಹಾನ್ ಅಜ್ಮಿ 66 ಕೋಟಿ ರೂಪಾಯಿ ಹೊಂದಿದ್ದಾರಂತೆ. ಇನ್ನೂ ಅನೇಕ ಬಾಲಿವುಡ್ ನಟಿಯರ ಪತಿಯರು ಹಲವು ಕೋಟಿ ರೂಪಾಯಿಯ ಆಸ್ತಿಗೆ ಒಡೆಯರಾಗಿದ್ದಾರೆ.

ಡೆಸ್ಸಿಂಗ್ ರೂಂನಲ್ಲಿ ಇಣುಕುತ್ತಿದ್ದ ಮೆಕ್ಯಾನಿಕ್ ಅಂದರ್

$
0
0

ಬೆಂಗಳೂರು: ಕ್ರೀಡಾ ಸಾಮಾಗ್ರಿ ಮಾರಾಟ ಮಳಿಗೆಯ ಡ್ರೆಸ್ಸಿಂಗ್‌ ರೂಮಿನ ಕಿಂಡಿಯಲ್ಲಿ ಇಣುಕಿ ನೋಡುತ್ತಿದ್ದ ಮೆಕ್ಯಾನಿಕ್‌ ಒಬ್ಬ ರೆಡ್‌ ಹ್ಯಾಂಡಾಗಿ ಸಿಕ್ಕಿ ಬಿದ್ದ ಘಟನೆ ಬನ್ನೇರುಘಟ್ಟದಲ್ಲಿ ನಡೆದಿದ್ದು, ಆತನನ್ನು ಈಗ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.

ಬನ್ನೇರುಘಟ್ಟ ರಸ್ತೆಯ ದೊಡ್ಡಕಮ್ಮನಹಳ್ಳಿ ನಿವಾಸಿಯಾದ ಮೆಕ್ಯಾನಿಕ್ ಶಿವಕುಮಾರ್‌ (26) ಬಂಧಿತ ಆರೋಪಿ. ವೈದ್ಯೆಯೊಬ್ಬರು ಮಳಿಗೆಯ ಡೆಸ್ಸಿಂಗ್ ರೂಂಗೆ ಬಟ್ಟೆ ಬದಲಿಸಲು ಹೋಗಿದ್ದಾಗ ಪಕ್ಕದ ರೂಮಿನಲ್ಲಿದ್ದ ಆರೋಪಿ ಇಣುಕಿ ನೋಡಿದ್ದಾನೆ. ಮೊದಲಿಗೆ ಯಾರದ್ದೋ ನೆರಳಿರಬೇಕು ಎಂದುಕೊಂಡು ಸುಮ್ಮನಾದ ಮಹಿಳೆಗೆ, ಕೆಲ ಕ್ಷಣಗಳಲ್ಲಿ ಮತ್ತೆ ಅದೇ ರೀತಿ ಕಾಣಿಸಿದೆ.

ತಕ್ಷಣ ಹೊರಗೆ ಬಂದ ಮಹಿಳೆ ಪಕ್ಕದ ಕೊಠಡಿಯಿಂದ ಹೊರಗೆ ಬಂದ ವ್ಯಕ್ತಿಯನ್ನು ಹಿಡಿದು ಪ್ರಶ್ನಿಸಿದ್ದಾರೆ. ಅದೇ ವೇಳೆ ಮತ್ತೊಂದು ಕೊಠಡಿಯಲ್ಲಿದ್ದ ಯುವತಿಯೂ ಬಂದು ವ್ಯಕ್ತಿಯ ವಿರುದ್ಧ ಇಣುಕು ನೋಡುತ್ತಿರುವ ಬಗ್ಗೆ ದೂರಿದ್ದಾರೆ. ಮಹಿಳೆಯರು ಜೋರು ಮಾಡಿದ ನಂತರ ಆತ ತಪ್ಪೊಪ್ಪಿಕೊಂಡಿದ್ದು, ಕ್ರೀಡಾ ಮಳಿಗೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಹಿಡಿದು ಹೊಯ್ಸಳ ಪೊಲೀಸರಿಗೆ ಒಪ್ಪಿಸಿದ್ದಾರೆ.

ಕೇರಳಕ್ಕೆ 500 ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಿದ ಪ್ರಧಾನಿ

$
0
0

ಮಳೆಯ ಆರ್ಭಟಕ್ಕೆ ದೇವರ ನಾಡು ಕೇರಳ ಅಕ್ಷರಶಃ ಸ್ತಬ್ಧವಾಗಿದೆ. ಮಳೆ ನೀರು ಕೇರಳ ವಾಸಿಗಳ ಜೀವನದ ಜೊತೆ ಚೆಲ್ಲಾಟ ಆಡಿದೆ. ಸರ್ಕಾರ ಸಹ ನಿರಾಶ್ರಿತರ ನೆರವಿಗೆ ಧಾವಿಸಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಕೇರಳದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ.

ಶನಿವಾರ, ಮೋದಿಯವರು ಕೇರಳ ಪ್ರವಾಹ ಪರಿಸ್ಥಿತಿಯನ್ನು ಖುದ್ದಾಗಿ ತಿಳಿದು, ಕೇಂದ್ರ ಸರ್ಕಾರದಿಂದ 500 ಕೋಟಿ ರೂಪಾಯಿ ಪ್ಯಾಕೇಜ್ ನಿಡೋದಾಗಿ ತಿಳಿಸಿದ್ದಾರೆ. ಪ್ರವಾಹದಲ್ಲಿ ಜೀವ ಕಳೆದುಕೊಂಡ ಕುಟುಂಬಗಳಿಗೆ ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ 2 ಲಕ್ಷ ರೂ. ಘೋಷಣೆ ಮಾಡಿದ್ದಾರೆ. ಅಲ್ಲದೆ ಗಂಭೀರ ಗಾಯಕ್ಕೆ ತುತ್ತಾದವರಿಗೆ 50 ಸಾವಿರ ರೂಪಾಯಿ ಪ್ರಕಟಿಸಿದ್ದಾರೆ.

ಮಳೆಯ ಅಟ್ಟಹಾಸಕ್ಕೆ ಕೇರಳ ನಲುಗಿದೆ. ಸ್ಟಾರ್ ಗಳು ಸಹ ತಮ್ಮ ಅಭಿಮಾನಿಗಳಿಗೆ ನೆರವು ನೀಡುವಂತೆ ಕೇಳಿಕೊಂಡಿದ್ದಾರೆ. ಹಲವು ಜನರು ತುತ್ತು ಅನ್ನ ಹಾಗೂ ನೀರಿಗಾಗಿ ಪರಿತಪಿಸುತ್ತಿದ್ದಾರೆ.

ಹೈವೇಯಲ್ಲಿ ಹೈಡ್ರಾಮಾ ಮಾಡಿದ್ಲು ಮತ್ತಿನಲ್ಲಿದ್ದ ಹುಡುಗಿ

$
0
0

ಮಧ್ಯಪ್ರದೇಶದಲ್ಲಿ ಮದ್ಯಪಾನಿಗಳ ಯಡವಟ್ಟು ಹೆಚ್ಚಾಗ್ತಿದೆ. ಈಗ ಮತ್ತಿನಲ್ಲಿದ್ದ ಯುವತಿಯ ರಾದ್ದಾಂತದ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಸಿಹೊಲ್ ಹೆದ್ದಾರಿಯಲ್ಲಿ ಕುಡಿದ ಹುಡುಗಿಯೊಬ್ಬಳು ಸ್ನೇಹಿತರ ಜೊತೆ ರಾದ್ದಾಂತ ಮಾಡಿದ್ದಾಳೆ. ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದಲ್ಲದೇ ಅವ್ರನ್ನು ತಳ್ಳಿದ್ದಾಳೆ.

ಹೈದ್ರಾಬಾದ್-ಮಧ್ಯಪ್ರದೇಶ ಹೈವೆಯಲ್ಲಿ ನಾಲ್ಕು ಹುಡುಗ್ರ ಜೊತೆ ಮದ್ಯ ಸೇವನೆ ಮಾಡ್ತಿದ್ದ ಯುವತಿಯರನ್ನು ಪೊಲೀಸರು ಹಿಡಿದಿದ್ದಾರೆ. ಈ ವೇಳೆ ಎಲ್ಲರೂ ನಶೆಯಲ್ಲಿದ್ದರು ಎನ್ನಲಾಗಿದೆ. ಪ್ರಜ್ಞೆ ಕಳೆದುಕೊಂಡಿದ್ದ ಯುವತಿಯೊಬ್ಬಳು, ತಡೆದ ಪೊಲೀಸರ ವಿರುದ್ಧ ತಿರುಗಿ ಬಿದ್ದಿದ್ದಾಳೆ.

ಪೊಲೀಸರಿಗೆ ಕೆಟ್ಟ ಶಬ್ಧ ಬಳಸಿ ಬೈದಿದ್ದಲ್ಲದೆ ಅವ್ರನ್ನು ತಳ್ಳಿದ್ದಾಳೆ. ಯುವತಿ ಹೈಡ್ರಾಮಾ ಸುಮಾರು 40 ನಿಮಿಷಗಳ ಕಾಲ ನಡೆದಿದೆ. ಪೊಲೀಸರು ಹುಡುಗಿ ಮನವೊಲಿಸುವ ಯತ್ನ ನಡೆಸಿದ್ದಾರೆ. ಆದ್ರೆ ಇದು ಸಾಧ್ಯವಾಗಲಿಲ್ಲ. ಹಾಗಾಗಿ ಹುಡುಗಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

ಪ್ಲೇ ಸ್ಟೋರ್ ನಿಂದ ದೇಸಿ ಆಪ್ ‘ಕಿಂಬೋ’ನಾಪತ್ತೆ…!

$
0
0

ನವದೆಹಲಿ: ಯೋಗ ಗುರು ಬಾಬಾ ರಾಮ್ ದೇವ್ ಒಡೆತನದ ಪತಂಜಲಿ ಆಯುರ್ವೇದ್ ಕಂಪನಿಯ ದೇಸಿ ವಾಟ್ಸಾಪ್ ಎಂದೇ ಹೇಳಲಾಗುವ ’ಕಿಂಬೊ’ ಗೂಗಲ್ ಪ್ಲೇಸ್ಟೋರ್ ನಿಂದ ಮತ್ತೆ ನಾಪತ್ತೆಯಾಗಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ರಾಮ್ ದೇವ್ ಕಂಪನಿ, ಇದು ಸ್ವದೇಶಿ ಸಂಸ್ಥೆ ವಿರುದ್ಧ ವಿದೇಶಿ ಕಂಪನಿಗಳು ನಡೆಸಿರುವ ಹುನ್ನಾರ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಪ್ಲೇ ಸ್ಟೋರ್‌ನಿಂದ ಕಿಂಬೊವನ್ನು ತೆಗೆದುಹಾಕಿದ್ದು ಏಕೆ…? ನಾವು ಗೂಗಲ್ ಜತೆ ಮಾತುಕತೆ ನಡೆಸಿದ್ದೇವೆ. ನಮ್ಮ ಇಮೇಲ್‌ಗೆ ಈವರೆಗೂ ಪ್ರತಿಕ್ರಿಯೆ ಬಂದಿಲ್ಲ ಕಾರಣವೇನು ಎಂದು ಪತಂಜಲಿ ಆಯುರ್ವೇದ್‌ ವಕ್ತಾರ ಎಸ್‌.ಕೆ. ತಿಜರಾವಾಲಾ ಪ್ರಶ್ನಿಸಿದ್ದಾರೆ.

ಹರಿದ್ವಾರ ಮೂಲದ ಪತಂಜಲಿ ಸಂಸ್ಥೆಯ ಕಿಂಬೋ ಪ್ರಾಯೋಗಿಕ ಆವೃತ್ತಿಯು ಗುರುವಾರ ಪ್ಲೇ ಸ್ಟೋರ್‌ಗೆ ಬಂದಿತ್ತು. ಅಧಿಕೃತವಾಗಿ ಇದು ಆ.27 ರಂದು ಬಿಡುಗಡೆಯಾಗಲಿದೆ ಎಂದು ಸಂಸ್ಥೆ ಹೇಳಿತ್ತು. ದೇಸಿ ವಾಟ್ಸಾಪ್‌ ಎಂದೇ ಪರಿಚಯವಾಗಿರುವ ಕಿಂಬೊ ವಾಟ್ಸಾಪ್ ಗೆ ಸೆಡ್ಡು ಹೊಡೆಯಲು ಮುಂದಾಗಿದೆ ಎಂದೇ ಬಿಂಬಿತವಾಗಿತ್ತು. ಕಿಂಬೊ ಎಂದರೆ ’ಏನ್ ಸಮಾಚಾರ’, ಏನು ನಡೆಯುತ್ತಿದೆ ಎಂದರ್ಥವಿದ್ದು, ಈಗ ಪತಂಜಲಿ ಕಂಪನಿ ಗೂಗಲ್ ವಿರುದ್ಧ ’ಕಿಂಬೊ…?’ ಎಂದು ಗುಡುಗಿದೆ.

Viewing all 122063 articles
Browse latest View live